ಕರ್ನಾಟಕ

karnataka

By

Published : Jan 7, 2021, 12:18 PM IST

ETV Bharat / sports

ಕಷ್ಟದ ದಿನಗಳಲ್ಲಿ ಜೊತೆಯಲ್ಲಿ ನಿಂತ ಗೆಳೆಯ: ಬಾಲ್ಯ ಸ್ನೇಹಿತನ ಕಾರ್ಯ ಮರೆಯಲ್ಲ ಎಂದ ದಾದಾ!

ಚಿಕಿತ್ಸೆ ನೀಡುವ ವೈದ್ಯರು ಗಂಗೂಲಿಯ ಆರೋಗ್ಯದ ಬಗ್ಗೆ ನಿರಂತರ ಜಾಗರೂಕತೆ ವಹಿಸಲಿದ್ದು, ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆ ಹೇಳಿದೆ.

Ganguly thanks friend Joydeep
ಗೆಳೆಯನಿಗೆ ಧನ್ಯವಾದ ತಿಳಿಸಿದ ಗಂಗೂಲಿ

ಕೋಲ್ಕತಾ (ಪಶ್ಚಿಮ ಬಂಗಾಳ):ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತ ಬಾಲ್ಯ ಸ್ನೇಹಿತ ಜಾಯ್‌ದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

"ಕಳೆದ 5 ದಿನಗಳಲ್ಲಿ ನೀವು ನನಗೆ ಏನು ಸಹಾಯ ಮಾಡಿದ್ದೀರಿ ಎಂಬುದು ನಾನು ಜೀವನಕ್ಕಾಗಿ ನೆನಪಿನಲ್ಲಿಟ್ಟುಕೊಳ್ಳುವ ಸಂಗತಿಯಾಗಿದೆ. ನಾನು ಕಳೆದ 40 ವರ್ಷಗಳಿಂದ ನಿನ್ನನ್ನು ತಿಳಿದಿದ್ದೇನೆ, ಆದರೆ ಈಗ ನಮ್ಮಿಬ್ಬರ ಸಂಬಂಧ ಕುಟುಂಬವನ್ನೂ ಮೀರಿದೆ" ಎಂದು ಗಂಗೂಲಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಡಿಸ್ಚಾರ್ಜ್ ಆದ ನಂತರ ಮಾತನಾಡಿದ ಸೌರವ್ ಗಂಗೂಲಿ, ತಮ್ಮನ್ನು ನೋಡಿಕೊಂಡಿದ್ದಕ್ಕಾಗಿ ವುಡ್​ಲ್ಯಾಂಡ್ಸ್​ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಧನ್ಯವಾದ ಅರ್ಪಿಸಿದ್ದರು. "ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದು, ಶೀಘ್ರದಲ್ಲೇ ಹಾರಲು ಸಿದ್ಧನಾಗುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

ಚಿಕಿತ್ಸೆ ನೀಡುವ ವೈದ್ಯರು ಗಂಗೂಲಿಯ ಆರೋಗ್ಯದ ಬಗ್ಗೆ ನಿರಂತರ ಜಾಗರೂಕತೆ ವಹಿಸಲಿದ್ದು, ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆ ತಿಳಿಸಿದೆ.

ABOUT THE AUTHOR

...view details