ಕೋಲ್ಕತಾ (ಪಶ್ಚಿಮ ಬಂಗಾಳ):ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತ ಬಾಲ್ಯ ಸ್ನೇಹಿತ ಜಾಯ್ದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
"ಕಳೆದ 5 ದಿನಗಳಲ್ಲಿ ನೀವು ನನಗೆ ಏನು ಸಹಾಯ ಮಾಡಿದ್ದೀರಿ ಎಂಬುದು ನಾನು ಜೀವನಕ್ಕಾಗಿ ನೆನಪಿನಲ್ಲಿಟ್ಟುಕೊಳ್ಳುವ ಸಂಗತಿಯಾಗಿದೆ. ನಾನು ಕಳೆದ 40 ವರ್ಷಗಳಿಂದ ನಿನ್ನನ್ನು ತಿಳಿದಿದ್ದೇನೆ, ಆದರೆ ಈಗ ನಮ್ಮಿಬ್ಬರ ಸಂಬಂಧ ಕುಟುಂಬವನ್ನೂ ಮೀರಿದೆ" ಎಂದು ಗಂಗೂಲಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.