ಕರ್ನಾಟಕ

karnataka

By

Published : Jan 7, 2020, 12:46 PM IST

ETV Bharat / sports

ಕರ್ನಾಟಕ-ಮುಂಬೈ ಪಂದ್ಯಕ್ಕೆ ಅತಿಥಿಗಳಾಗಿ ಬಂದು ಸೆರೆಯಾದ ಹಾವುಗಳು!

ಮಳೆಯಿಂದ, ಫ್ಲಡ್​ಲೈಟ್​ ಕೈಕೊಡುವುದರಿಂದ ಅಥವಾ ಮಂದ ಬೆಳಕಿನ ಕಾರಣದಿಂದ ಪಂದ್ಯಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವಂತಹ ಘಟನೆ ತುಂಬಾ ನಡೆದಿವೆ. ಆದರೆ ಮೈದಾನಕ್ಕೆ ಹಾವುಗಳು ನುಗ್ಗಿ ಪಂದ್ಯವನ್ನು ನಿಲ್ಲಿಸಿದ ಪ್ರಸಂಗ ಕರ್ನಾಟಕ ಹಾಗೂ ಮುಂಬೈ ನಡುವೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ನಡೆದ ರಣಜಿ ಪಂದ್ಯದಲ್ಲಿ ನಡೆದಿದೆ.

Ranji Trophy
Ranji Trophy

ಮುಂಬೈ: ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯದ ವೇಳೆ ಮೈದಾನದಕ್ಕೆ ಎರಡು ಹಾವು ನುಗ್ಗಿ ಪಂದ್ಯ ಸ್ಥಗಿತಗೊಳ್ಳುವಂತೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಳೆಯಿಂದ, ಫ್ಲಡ್​ಲೈಟ್​ ಕೈಕೊಡುವುದರಿಂದ ಅಥವಾ ಮಂದ ಬೆಳಕಿನ ಕಾರಣದಿಂದ ಪಂದ್ಯಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವಂತಹ ಘಟನೆ ತುಂಬಾ ನಡೆದಿವೆ. ಆದರೆ ಮೈದಾನಕ್ಕೆ ಹಾವುಗಳು ನುಗ್ಗಿ ಪಂದ್ಯವನ್ನು ನಿಲ್ಲಿಸಿದ ಘಟನೆ ಕರ್ನಾಟಕ ಹಾಗೂ ಮುಂಬೈ ನಡುವೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ನಡೆದ ರಣಜಿ ಪಂದ್ಯದಲ್ಲಿ ನಡೆದಿದೆ.

ಎರಡು ಹಾವುಗಳು ಮೈದಾನಕ್ಕೆ ನುಗ್ಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಮೈದಾನದ ಸಿಬ್ಬಂದಿ ಹಾವುಗಳನ್ನು ಹಿಡಿದು ಮೈದಾನದಿಂದ ಕೊಂಡೊಯ್ದಿದ್ದಾರೆ. ಈ ರೀತಿ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಡಿಸೆಂಬರ್​ 9ರಂದು ನಡೆದಿದ್ದ ವಿದರ್ಭ ಹಾಗೂ ಹೈದರಾಬಾದ್​ ತಂಡಗಳ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನ ಪ್ರವೇಶಿಸಿ ಆಟವನ್ನು ಸ್ಥಗಿತಗೊಳಿಸಿತ್ತು.

ಇನ್ನು ಈ ಪಂದ್ಯದಲ್ಲಿ ಕರ್ನಾಟಕ ತಂಡ 5 ವಿಕೆಟ್​ಗಳಿಂದ ಮುಂಬೈ ತಂಡವನ್ನು ಮಣಿಸಿತು. ಮುಂಬೈ ತಂಡದಲ್ಲಿ ಘಟಾನುಘಟಿಗಳಿದ್ದರೂ ತವರಿನಲ್ಲೇ ಸತತ ಎರಡು ಪಂದ್ಯದಲ್ಲಿ ಸೋಲನುಭವಿಸಿತು.

ABOUT THE AUTHOR

...view details