ಜಾರ್ಜ್ಟೌನ್:ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಪಂದ್ಯ ಆರಂಭವಾಗಿ ರದ್ದಾಗುವುದು ಕ್ರಿಕೆಟ್ನ ಕೆಟ್ಟ ಭಾಗ ಎಂದಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ರದ್ದಾಗಿರುವುದಕ್ಕೆ ಕೊಹ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ. ಟೂರ್ನಿ ಮಧ್ಯೆ ಪದೇ ಪದೇ ಪಂದ್ಯ ಆರಂಭವಾಗಿ ನಿಲ್ಲುವುದು ಕ್ರಿಕೆಟ್ಗೆ ಶೋಭೆಯಲ್ಲ. ಈ ರೀತಿ ಪಂದ್ಯದ ಮಧ್ಯ ಮಳೆ ಬಂದು ಮತ್ತೆ ನಿಂತಮೇಲೆ ಮತ್ತೆ ಮೈದಾನಕ್ಕೆ ಬಂದು ಆಡುವುದರಿಂದ ಆಟಗಾರರು ಗಾಯಕ್ಕೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ ಎಂದರು.