ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಸನ್​ರೈಸರ್ಸ್​... 40 ವರ್ಷದ ಹರ್ಭಜನ್​ಗೆ ಅವಕಾಶ ನೀಡಿದ ಕೆಕೆಆರ್!​

ಇಂಡಿಯನ್ ಪ್ರೀಮಿಯರ್ ಲೀಗ್​ನ 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ರೈಡರ್ಸ್ ವಿರುದ್ಧ ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್ ವಾರ್ನರ್​ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

By

Published : Apr 11, 2021, 7:07 PM IST

Updated : Apr 11, 2021, 7:23 PM IST

ಕೋಲ್ಕತ್ತಾ ನೈಟ್​ ರೈಡರ್ಸ್​ vs ಸನ್​ರೈಸರ್ಸ್ ಹೈದರಾಬಾದ್​
ಕೋಲ್ಕತ್ತಾ ನೈಟ್​ ರೈಡರ್ಸ್​ vs ಸನ್​ರೈಸರ್ಸ್ ಹೈದರಾಬಾದ್​

ಚೆನ್ನೈ:ಇಂಡಿಯನ್ ಪ್ರೀಮಿಯರ್ ಲೀಗ್​ನ 3ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ರೈಡರ್ಸ್ ವಿರುದ್ಧ ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್ ವಾರ್ನರ್​ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಬಾರಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದ ಕೆಕೆಆರ್​ ಈ ಬಾರಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದೆ. ಈ ವರ್ಷವಷ್ಟೇ ಕೆಕೆಆರ್​ ಸೇರಿರುವ 40 ವರ್ಷದ ಹರ್ಭಜನ್​ ಸಿಂಗ್​ ಅವರನ್ನು ಇಂದಿನ ಪಂದ್ಯದಲ್ಲಿ ಆಡಿಸಲು ನಿರ್ಧರಿಸಿದೆ. ಸ್ಪಿನ್ ಸ್ನೇಹಿ ಪಿಚ್​ ಆದ ಕಾರಣ ಭಜ್ಜಿ ಜೊತೆಗೆ ವರುಣ್ ಚಕ್ರವರ್ತಿ, ಶಕಿಬ್​ ಕೂಡ ತಂಡದಲ್ಲಿದ್ದಾರೆ. ವಿದೇಶಿ ಆಟಗಾರರ ವಿಭಾಗದಲ್ಲಿ ಶಕಿಬ್ ಅಲ್ ಹಸನ್​, ಪ್ಯಾಟ್ ಕಮ್ಮಿನ್ಸ್​, ಇಯಾನ್​ ಮಾರ್ಗನ್​ ಮತ್ತು ಆ್ಯಂಡ್ರೆ ರಸೆಲ್ ಕಣಕ್ಕಿಳಿದಿದ್ದಾರೆ.

ಹೈದರಾಬಾದ್ ಕಡೆ ಡೇವಿಡ್ ವಾರ್ನರ್​, ಜಾನಿ ಬೈರ್ಸ್ಟೋವ್​, ಮೊಹಮ್ಮದ್ ನಬಿ, ರಶೀದ್ ಖಾನ್​ ಆಡಲಿದ್ದಾರೆ. ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹೈದರಾಬಾದ್ ಕೂಡ ಪಿಚ್​ಗೆ ತಕ್ಕಂತೆ ಇಬ್ಬರು ವಿದೇಶಿ ಸ್ಪಿನ್ನರ್​ಗಳನ್ನು ಆಡಿಸುತ್ತಿದೆ. ಹಾಗಾಗಿ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್​ಗೆ ಆಡುವ ಅವಕಾಶ ಸಿಕ್ಕಿಲ್ಲ.

ಸನ್​ರೈಸರ್ಸ್​ ಹೈದರಾಬಾದ್​:

ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮನೀಶ್ ಪಾಂಡೆ,ಅಬ್ದುಲ್ ಸಮದ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ರಶೀದ್ ಖಾನ್, ಸಂದೀಪ್ ಶರ್ಮಾ

ಕೋಲ್ಕತ್ತಾ ನೈಟ್​ ರೈಡರ್ಸ್:

ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಪ್ಯಾಟ್ ಕಮ್ಮಿನ್ಸ್, ಪ್ರಸಿದ್ ಕೃಷ್ಣ, ಶಕಿಬ್ ಅಲ್ ಹಸನ್, ಹರ್ಭಜನ್ ಸಿಂಗ್

Last Updated : Apr 11, 2021, 7:23 PM IST

ABOUT THE AUTHOR

...view details