ಕರ್ನಾಟಕ

karnataka

By

Published : Jan 2, 2021, 6:27 PM IST

ETV Bharat / sports

ಆಂಜಿಯೋಪ್ಲಾಸ್ಟಿ ಬಳಿಕ ಪ್ರಜ್ಞೆ ಬಂದಿದ್ದು, ಮಾತನಾಡುತ್ತಿದ್ದಾರೆ: ಗಂಗೂಲಿ ಆರೋಗ್ಯದ ಬಗ್ಗೆ ವೈದ್ಯರ ಹೇಳಿಕೆ​

ಮನೆಯ ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಗಂಗೂಲಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಕೊಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೌರವ್​ ಗಂಗೂಲಿ ಹೃದಯಾಘಾತ
ಸೌರವ್​ ಗಂಗೂಲಿ ಹೃದಯಾಘಾತ

ಕೋಲ್ಕತ್ತಾ:ಲಘು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪ್ರಜ್ಞೆ ಬಂದಿದ್ದು, ಮಾತನಾಡುತ್ತಿದ್ದಾರೆ ಎಂದು ಕೋಲ್ಕತ್ತಾದ ವುಡ್​ಲ್ಯಾಂಡ್ಸ್‌​ ಆಸ್ಪತ್ರೆಯ ವೈದ್ಯ ಡಾ.ಅಫ್ತಬ್​ ಖಾನ್ ತಿಳಿಸಿದರು.

ಸೌರವ್​ ಗಂಗೂಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ. ಅವರು ಮುಂದಿನ 24 ಗಂಟೆಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಪ್ರಸ್ತುತ ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದಾರೆ. ಅವರ ಹೃದಯದಲ್ಲಿ ಎರಡು ಅಡೆತಡೆಗಳಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಖಾನ್ ಹೇಳಿದರು.

ABOUT THE AUTHOR

...view details