ಕೆಲವು ಸಿನಿಮಾಗಳ ಸೋಲಿಂದ ಬೇಜಾರಾಗಿದ್ದ ನಟ ಶ್ರೀಮುರಳಿಗೆ ಬ್ರೇಕ್ ನೀಡಿದವರು ನಿರ್ದೇಶಕ ಪ್ರಶಾಂತ್ ನೀಲ್. ಇವರ ಸಹೋದರಿ ವಿದ್ಯಾರನ್ನು ಶ್ರೀಮುರಳಿ 2008ರಲ್ಲಿ ಕೈ ಹಿಡಿಯುತ್ತಾರೆ. ಇದರಿಂದ 'ಉಗ್ರಂ' ಸಿನಿಮಾ ಬಿಡುಗಡೆಯಾದ ಸಮಯದಲ್ಲಿ, ಈ ಸಿನಿಮಾ ನಾನು ನನ್ನ ಭಾವನಿಗೆ ನೀಡಿದ 'ಡೌರಿ' ಎಂದು ಪ್ರಶಾಂತ್ ನೀಲ್ ಹೇಳಿದ್ದೂ ಇದೆ.
‘ಉಗ್ರಂ’ ಯಶಸ್ಸಿನಿಂದ ಶ್ರೀಮುರಳಿ ‘ರಥಾವರ' ಹಾಗೂ 'ಮಫ್ತಿ’ ಸಿನಿಮಾಗಳು ಯಶಸ್ಸು ಕಂಡಿವೆ. ಇತ್ತ ಪ್ರಶಾಂತ್ ನೀಲ್ ‘ಕೆ ಜಿ ಎಫ್’ ಮೂಲಕ ಭಾರತದ ಉದ್ದಗಲಕ್ಕೂ ಬೆಳೆದು ನಿಂತರು. ಕನ್ನಡದ ಬಹು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕನಾಗಿಯೂ ಅವರು ಹೊರಹೊಮ್ಮಿದರು.
ಶ್ರೀಮುರುಳಿ, ಪ್ರಶಾಂತ್ ನೀಲ್ ಈಗ ಮತ್ತೆ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಜೊತೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಗಾಂಧಿನಗರದಿಂದ ಕೇಳಿಬರ್ತಿವೆ. ಶ್ರೀಮುರಳಿ ಮುಂದಿನ ತಿಂಗಳು ನಿರ್ದೇಶಕ ಮಹೇಶ್ರೊಂದಿಗೆ ‘ಮದಗಜ’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇತ್ತ ಪ್ರಶಾಂತ್ ನೀಲ್ 'ಕೆಜಿಎಫ್ ಚಾಪ್ಟರ್- 2' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಇಬ್ಬರೂ ಸದ್ಯ ಇರುವ ಕೆಲಸಗಳನ್ನು ಮುಗಿಸಿ ನಂತರ ಉಗ್ರಂ 2 ಸಿನಿಮಾ ಮಾಡುವ ಸಾಧ್ಯತೆಗಳಿವೆ.
'ಉಗ್ರಂ 2' ಬಗ್ಗೆ ಚರ್ಚೆಯೂ ಆಗಿದೆ. ಈ ವಿಚಾರವನ್ನು ‘ಭರಾಟೆ’ ಸಕ್ಸಸ್ ಪತ್ರಿಕಾಗೋಷ್ಟಿ ನಂತರ ಶ್ರೀಮುರಳಿ ಹೇಳಿಕೊಂಡಿದ್ದಾರೆ. ಈ ಮೂಲಕ ‘ಉಗ್ರಂ 2’ 2021ಕ್ಕೆ ಪ್ರಾರಂಭ ಆಗುವ ಸೂಚನೆಯೂ ಸಿಕ್ಕಿದೆ.