ಕರ್ನಾಟಕ

karnataka

By

Published : Oct 15, 2019, 4:05 PM IST

ETV Bharat / sitara

ಡಾ.ರಾಜ್​​​ಕುಮಾರ್ ಐಎಎಸ್ ಅಕಾಡೆಮಿ ಈಗ ಟ್ರಸ್ಟ್, ಹಣ ಮಾಡುವ ಆಸೆಯಿಲ್ಲ: ರಾಘಣ್ಣ

ಡಾ.ರಾಜ್‌ಕುಮಾರ್ ಐಎಎಸ್ ಅಕಾಡೆಮಿ ಈಗ ‘ಟ್ರಸ್ಟ್’ ಆಗಿ ಪರಿವರ್ತನೆ ಆಗಿದೆ. ಟ್ರಸ್ಟ್ ಆಗಿ ಬದಲಾಗುವುದರಿಂದ ಇಲ್ಲಿ ಸೇವೆ ಮಾಡುವುದೇ ಮುಖ್ಯ ಉದ್ದೇಶವಾಗಿರುತ್ತದೆ ಎಂದು ರಾಘವೇಂದ್ರ ರಾಜ್​ ಕುಮಾರ್​ ತಿಳಿದರು.

ರಾಜ್​ ಕುಮಾರ್​ ಮತ್ತು ರಾಘವೇಂದ್ರ ರಾಜ್​ ಕುಮಾರ್​​

ಕೆಲವು ವರ್ಷಗಳ ಹಿಂದೆ ಆರಂಭವಾದ ಡಾ.ರಾಜಕುಮಾರ್ ಐಎಎಸ್ ಅಕಾಡೆಮಿ ಈಗ ‘ಟ್ರಸ್ಟ್’ ಆಗಿ ಪರಿವರ್ತನೆ ಆಗಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಟ್ರಸ್ಟ್ ಆಗಿ ಬದಲಾಗುವುದರಿಂದ ಸೇವೆಯೇ ಮುಖ್ಯ ಉದ್ದೇಶವಾಗುತ್ತದೆ. ಈ ಆಲೋಚನೆಯನ್ನು ತಮ್ಮ ಎರಡನೇ ಮಗ ಗುರು ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ತಿಳಿಸಿದ್ದಾರೆ ಎಂದು ರಾಘಣ್ಣ ಹೇಳಿದ್ರು.

ಗುರು ರಾಜಕುಮಾರ್ ಹಾಗೂ ಮಡದಿ ಶ್ರೀ ದೇವಿ

ತಮ್ಮ ತಂದೆ ಡಾ. ರಾಜ್‌ ಕುಮಾರ್​​ ಜೀವನದ ಬಗ್ಗೆ ಹೇಳುತ್ತಾ ರಾಘಣ್ಣ, ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರಿಗೆ ತಿಳಿಯದೆ ದಾನ ಮಾಡುತ್ತಿದ್ದರಂತೆ. ಅಣ್ಣಾವ್ರ ಈ ಗುಣ ಶಿವರಾಜಕುಮಾರ್ ಅವರಿಗೆ ಬಾಲ್ಯದಲ್ಲಿ ಇದ್ದಿದ್ದು ನಿಜ. ಬಾಲಕನಾಗಿದ್ದಾಗ ಶಿವರಾಜ್‌ ಕುಮಾರ್ ತಾವು ಹಾಕಿಕೊಂಡಿದ್ದ ಅಂಗಿಯನ್ನೇ ಕೇಳಿದವರಿಗೆ ಕೊಟ್ಟು ಮನೆಗೆ ಬರ್ತಿದ್ರಂತೆ ಎಂದರು.

ರಾಜ್​​ ಕುಮಾರ್​ ಕುಟುಂಬ

ಈಗ ಗುರು ರಾಜಕುಮಾರ್ ಐಎಎಸ್ ಅಕಾಡೆಮಿಯಿಂದ ಹಣ ಮಾಡುವ ಪರಿಕಲ್ಪನೆಗೆ ತಿಲಾಂಜಲಿ ಹಾಡಿದ್ದಾರೆ. ಒಬ್ಬ ವ್ಯಕ್ತಿ ಐಎಎಸ್ ಓದುವುದಕ್ಕೆ ಈ ಟ್ರಸ್ಟ್ ಸೇರಿಕೊಂಡರೆ ಆತನ ವಿದ್ಯಾಭ್ಯಾಸ ಮುಗಿಸಿದ ನಂತರ ಆತನಿಂದ ಪಡೆದ ಫೀಜ್ 55000 ರೂಪಾಯಿಯನ್ನು ಹಿಂತಿರುಗಿಸಲಾಗುವುದು ಎಂಬ ಆಲೋಚನೆ ಇದೆ ಎಂದರು.

ABOUT THE AUTHOR

...view details