ಕರ್ನಾಟಕ

karnataka

By

Published : Jun 25, 2019, 11:44 PM IST

ETV Bharat / sitara

'ಗುಳ್ಟು' ನವೀನ್​ ಶಂಕರ್ ಹೊಸ ಸಿನಿಮಾಗೆ ಮುಹೂರ್ತ

'ಗುಳ್ಟು' ಖ್ಯಾತಿಯ ನವೀನ್ ಶಂಕರ್ ಅಭಿನಯದ ಎರಡನೇ ಸಿನಿಮಾಗೆ ನಿನ್ನೆ ಮುಹೂರ್ತ ನೆರವೇರಿದ್ದು, ನೀನಾಸಂ ಸತೀಶ್ ಹಾಗೂ ಹಿರಿಯ ನಟ ಅವಿನಾಶ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನವೀನ್​ ಶಂಕರ್ ಹೊಸ ಸಿನಿಮಾ

ಕಳೆದ ವರ್ಷ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರದಲ್ಲಿ 'ಗುಳ್ಟು' ಕೂಡಾ ಒಂದು. ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿ ನಟಿಸಿದ್ದರೆ, ಹೊಸ ಪ್ರತಿಭೆ ನವೀನ್ ಶಂಕರ್ ನಾಯಕನಾಗಿ ನಟಿಸಿ ಸ್ಯಾಂಡಲ್​ವುಡ್​​ನಲ್ಲಿ ಭರವಸೆ ಮೂಡಿಸಿದ್ದರು.

ನೀನಾಸಂ ಸತೀಶ್, ನವೀನ್ ಶಂಕರ್​

'ಗುಳ್ಟು' ಯಶಸ್ವಿ 50 ದಿನಗಳನ್ನು ಪೂರೈಸಿದ್ದರೂ ಕೂಡಾ ನವೀನ್​​​ಗೆ ಒಳ್ಳೆಯ ಆಫರ್ ಸಿಕ್ಕಿರಲಿಲ್ಲ. ಇದೀಗ ಅವರು ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದು, ನಿನ್ನೆ ಸಿನಿಮಾದ ಮುಹೂರ್ತ ನೆರವೇರಿದೆ. ಜೆ.ಪಿ. ನಗರದ ಸತ್ಯ ಗಣಪತಿ ದೇವಾಲಯದಲ್ಲಿ ನಡೆದ‌ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಸತೀಶ್ ನೀನಾಸಂ ಆಗಮಿಸಿ ಕ್ಯಾಮರಾ ಚಾಲನೆ ಮಾಡಿದರೆ, ನಟ ಅವಿನಾಶ್ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರ ಪ್ರೊಡಕ್ಷನ್​​ ನಂ.1 ಹೆಸರಿನಲ್ಲಿ ಸೆಟ್ಟೇರಿದೆ. ಪೂರಿ ಜಗನ್ನಾಥ್ ಶಿಷ್ಯ ಶ್ರೀಧರ್ ಷಣ್ಮುಖ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಅವಿನಾಶ್, ನೀನಾಸಂ ಸತೀಶ್, ಐಶಾನಿ ಶೆಟ್ಟಿ

ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ನಡುವೆ ಅಂತರವಿರಲಿ' ಸಿನಿಮಾದ ಬಳಿಕ ಐಶಾನಿ ‌ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ.

ಅವಿನಾಶ್, ನೀನಾಸಂ ಸತೀಶ್

For All Latest Updates

TAGGED:

ABOUT THE AUTHOR

...view details