ಕರ್ನಾಟಕ

karnataka

By

Published : Dec 3, 2020, 9:20 PM IST

ETV Bharat / sitara

ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮಗಧೀರ'

ಸೌತ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹಿಟ್ ಆಗಿದ್ದ ಮಗಧೀರ ಸಿನಿಮಾ ಇದೀಗ ಕನ್ನಡದ ಜನಪ್ರೀಯ ವಾಹಿನಿ ಉದಯದಲ್ಲಿ ಪ್ರಸಾರವಾಗಲಿದೆ.

magadheera in kannada version
ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮಗಧೀರ'

ರಾಜಮೌಳಿ ನಿರ್ದೇಶನದ ತೆಲುಗಿನ ಮಗಧೀರ ಚಿತ್ರ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹಿಟ್ ಆಗಿದ್ದು, ಇದೀಗ ಕನ್ನಡದ ಜನಪ್ರಿಯ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಆದ್ರೆ ಕನ್ನಡದಲ್ಲಿ ಈ ಸಿನಿಮಾದ ಹೆಸರನ್ನು ಮಹಾಬಲಿ ಭೈರವ ಎಂದು ಇಡಲಾಗಿದೆ. ಇದೇ ಭಾನುವಾರ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಮಗಧೀರ ಕನ್ನಡ ವರ್ಷನ್ ಪ್ರಸಾರವಾಗಲಿದೆ.

ತೆಲುಗಿನ ಮಗಧೀರ ಚಿತ್ರವು 2009ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ರಾಮ್​ಚರಣ್​ ಮತ್ತು ಕಾಜಲ್​ ​​ಅಗರ್ ವಾಲ್ ಚಿತ್ರದಲ್ಲಿ ಲೀಡ್​​ ರೋಲ್​​​ ಪ್ಲೇ ಮಾಡಿದ್ದಾರೆ.

ಅಲ್ಲು ಅರವಿಂದ್ ಮತ್ತು ಬಿವಿಎಸ್‌ಎನ್ ಪ್ರಸಾದ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾಕ್ಕೆ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಅಲ್ಲದೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ.

ABOUT THE AUTHOR

...view details