ಕರ್ನಾಟಕ

karnataka

ನೀವು ವಿಲನ್​ ಆದ್ರೆ ಮಾತ್ರ ನಾನು ಹೀರೋ ಆಗೋಕೆ ಸಾಧ್ಯ: ವಿರೋಧಿಗಳಿಗೆ ಕಂಗನಾ ಟಾಂಗ್​​​

By

Published : Nov 27, 2020, 4:25 PM IST

ಒಬ್ಬಳೇ ಸರ್ಕಾರದ ಕ್ರಮದ ವಿರುದ್ಧ ಹೋರಾಡಿ ಗೆದ್ದಿದ್ದೇನೆ ಅಂದ್ರೆ ಅದು ಕೇವಲ ನನ್ನ ಜಯ ಅಲ್ಲ. ಅದು ಪ್ರಜಾಪ್ರಭುತ್ವದ ಜಯ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಆ ವೇಳೆಯಲ್ಲಿ ನನಗೆ ಧೈರ್ಯ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬಾಂಬೆ ಹೈಕೋರ್ಟ್​​ ಆದೇಶ ಬಂದ ನಂತರ ಕಂಗನಾ ಹೇಳಿದ್ದಾರೆ.

Kangana Ranaut reaction on Bombay HC result
ನೀವು ವಿಲನ್​ ಆದ್ರೆ ಮಾತ್ರ ನಾನು ಹೀರೋ ಆಗೋಕೆ ಸಾಧ್ಯ : ವಿರೋಧಿಗಳಿಗೆ ಕಂಗನಾ ಟಾಂಗ್​​​

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಬಂಗಲೆಯನ್ನು ಬೃಹನ್‌ ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಕೆಡವಿದ ಕ್ರಮ ದುರುದ್ದೇಶದಿಂದ ಕೂಡಿದೆ, ಇದರಿಂದ ಕಂಗನಾಗೆ ಸಾಕಷ್ಟು ನಷ್ಟವಾಗಿದೆ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೇ ಬಿಎಂಸಿ ಆದೇಶವನ್ನು ಶುಕ್ರವಾರ ಅನೂರ್ಜಿತಗೊಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್​​, ಒಬ್ಬಳೇ ಸರ್ಕಾರದ ಕ್ರಮದ ವಿರುದ್ಧ ಹೋರಾಡಿ ಗೆದ್ದಿದ್ದೇನೆ ಅಂದ್ರೆ ಅದು ಕೇವಲ ನನ್ನ ಜಯ ಅಲ್ಲ. ಅದು ಪ್ರಜಾಪ್ರಭುತ್ವದ ಜಯ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಆ ವೇಳೆಯಲ್ಲಿ ನನಗೆ ಧೈರ್ಯ ನೀಡಿದ ಎಲ್ಲರಿಗೂ ಧನ್ಯವಾದ ಎಂದೂ ಕಂಗನಾ ಇದೇ ವೇಳೆ ಹೇಳಿದ್ದಾರೆ.

ಮತ್ತು ತಮ್ಮ ವಿರೋಧಿಗಳಿಗೆ ನಯವಾಗಿಯೇ ಟಾಂಗ್​​ ಕೊಟ್ಟಿರುವ ನಟಿ ಕಂಗನಾ ರಣಾವತ್​​, ನನ್ನ ಕನಸುಗಳು ಮುರಿದ, ನನ್ನ ಬಂಗಲೆ ಹಾಳಾದಾಗ ನಗುತ್ತಿದ್ದ ನಿಮಗೂ ಧನ್ಯವಾದಗಳು. ನೀವು ವಿಲನ್​ ಆಗಿದ್ದಾಗ ಮಾತ್ರ ನಾನು ಹೀರೋ ಆಗಲು ಸಾಧ್ಯ ಎಂದಿದ್ದಾರೆ.

ಕಂಗನಾ ರಣಾವತ್​​​ ಸೆಪ್ಟೆಂಬರ್‌ 9ರಂದು ಬಾಂದ್ರಾದಲ್ಲಿರುವ ತಮ್ಮ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಟಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನೀವು ವಿಲನ್​ ಆದ್ರೆ ಮಾತ್ರ ನಾನು ಹೀರೋ ಆಗೋಕೆ ಸಾಧ್ಯ

ABOUT THE AUTHOR

...view details