ಸಿನಿಮಾ ನಟರನ್ನು ಅಭಿಮಾನಿಗಳು ಆರಾಧಿಸುವುದು ಸಾಮಾನ್ಯ. ಆದರೆ ಅಭಿಮಾನಿಗಳು ಕೂಡಾ ತಮ್ಮ ಕುಟುಂಬದ ಸದಸ್ಯರಂತೆ ಕಾಣುವ ಸಿನಿಮಾ ನಟರು ಬಹಳ ಅಪರೂಪ. ಅಂತಹ ಕೆಲವೇ ಕೆಲವು ವ್ಯಕ್ತಿಗಳ ಪೈಕಿ ಜ್ಯೂ. ಎನ್ಟಿಆರ್ ಅಲಿಯಾಸ್ ತಾರಕ್ ಕೂಡಾ ಒಬ್ಬರು.
ಅಭಿಮಾನಿ ಜಯದೇವ್ ನಿಧನಕ್ಕೆ ಮನನೊಂದ ಜ್ಯೂ. ಎನ್ಟಿಆರ್
ತಮ್ಮ ಅಭಿಮಾನಿ ಜಯದೇವ್ ಸಾವಿಗೆ ಟಾಲಿವುಡ್ ನಟ ಜ್ಯೂ. ಎನ್ಟಿಆರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಭಿಮಾನಿ ಜಯದೇವ್ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.
ಜ್ಯೂ. ಎನ್ಟಿಆರ್ ಅವರನ್ನು ಬಹಳವಾಗಿ ಇಷ್ಟಪಡುತ್ತಿದ್ದ ಜಯದೇವ್ ಎಂಬ ಅಭಿಮಾನಿಯೊಬ್ಬರು ಇತ್ತೀಚೆಗೆ ನಿಧನರಾಗಿದ್ದು ಅಭಿಮಾನಿ ಧಿಡೀರ್ ಸಾವಿಗೆ ನಾಯಕ ನಟ ಬಹಳ ದು:ಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿರುವ ಅವರು, 'ಜಯದೇವ್ ಇನ್ನಿಲ್ಲ ಎಂಬ ಸುದ್ದಿ ತಿಳಿದು ನನಗೆ ಬಹಳ ಶಾಕ್ ಆಯ್ತು. ನಾನು ಬಹಳವಾಗಿ ಇಷ್ಟಪಡುವ ವ್ಯಕ್ತಿಗಳಲ್ಲಿ ನೀವು ಕೂಡಾ ಒಬ್ಬರು. 'ನಿನ್ನು ಚೂಡಾಲನಿ' ಸಿನಿಮಾದಿಂದ ಆರಂಭವಾದ ನಮ್ಮ ಪರಿಚಯ ಅರ್ಧದಲ್ಲೇ ಮುಗಿಯುತ್ತದೆ ಎಂದು ಊಹಿಸಿರಲಿಲ್ಲ. ನಾನು ಸಿನಿಮಾರಂಗದಲ್ಲಿ ಇಟ್ಟ ಮೊದಲ ಹೆಜ್ಜೆಯಿಂದ ಇಲ್ಲಿವರೆಗೂ ನನ್ನ ಜೊತೆ ಇದ್ದವರಲ್ಲಿ ಜಯದೇವ್ ಬಹಳ ಪ್ರಮುಖ ವ್ಯಕ್ತಿ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಜ್ಯೂ. ಎನ್ಟಿಆರ್ ಬೇಸರದಿಂದ ಬರೆದುಕೊಂಡಿದ್ದಾರೆ.
ಇನ್ನು ಜ್ಯೂ. ಎನ್ಟಿಆರ್ ಸದ್ಯಕ್ಕೆ ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದಲ್ಲಿ ರಾಮ್ಚರಣ್ ತೇಜ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.