ಕರ್ನಾಟಕ

karnataka

Bigg Boss: ನಿನ್ನ ಫ್ಯಾನ್ಸ್ Vote ಮಾಡುವುದಿಲ್ಲ, ನಾನು ಹೊರಗೆ ಹೋಗುತ್ತೇನೆ ಎಂದ ದಿವ್ಯಾ ಸುರೇಶ್

By

Published : Jul 1, 2021, 8:08 AM IST

Bigg Boss 8 ಸೀಸನ್​ನಲ್ಲಿ ದಿವ್ಯಾ ಸುರೇಶ್​ ಮತ್ತು ಮಂಜು ಮಧ್ಯೆ ಮುನಿಸು ಪ್ರಾರಂಭವಾಗಿದೆ. ನಿನ್ನ ಫ್ಯಾನ್ಸ್ ವೋಟ್ ಮಾಡುವುದಿಲ್ಲ, ನಾನು ಹೊರಗೆ ಹೋಗುತ್ತೇನೆ ಎಂದು ದಿವ್ಯಾ ಸುರೇಶ್ ಮಂಜು ಮೇಲಿನ ಬೇಸರ ಹೊರ ಹಾಕಿದ್ದಾರೆ.

Clash between Manju and divya suresh, Clash between Manju and divya suresh in Bigg boss, divya suresh, divya suresh news, Bigg Boss, Bigg Boss 8, Bigg Boss 8 news, ದಿವ್ಯಾ ಸುರೇಶ್​ ಮತ್ತು ಮಂಜು ಮಧ್ಯೆ ಗಲಾಟೆ, ಬಿಗ್​ ಬಾಸ್​ನಲ್ಲಿ ದಿವ್ಯಾ ಸುರೇಶ್​ ಮತ್ತು ಮಂಜು ಮಧ್ಯೆ ಗಲಾಟೆ, ದಿವ್ಯಾ ಸುರೇಶ್​ ಮತ್ತು ಮಂಜು ಮಧ್ಯೆ ಗಲಾಟೆ ಸುದ್ದಿ, ದಿವ್ಯಾ ಸುರೇಶ್​ ಸುದ್ದಿ, ಬಿಗ್​ ಬಾಸ್​, ಬಿಗ್​ ಬಾಸ್​ 8 ಸುದ್ದಿ,
ದಿವ್ಯಾ ಸುರೇಶ್

'ನನ್ನ ಜೊತೆ ಮಾತನಾಡುವುದನ್ನು ನೀನು ನಿಲ್ಲಿಸಿದರೆ ನಿನ್ನ ಫ್ಯಾನ್ಸ್ ನನಗೆ ವೋಟ್ ಮಾಡೋದನ್ನು ನಿಲ್ಲಿಸುತ್ತಾರೆ. ನಾನು ಈ ವಾರ ಮನೆಯಿಂದ ಹೊರಗೆ ಹೋಗುತ್ತೇನೆ' ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.

ದಿವ್ಯಾ ಸುರೇಶ್

ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ದಿವ್ಯಾ ಸುರೇಶ್, ಶಮಂತ್ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು. ಅದನ್ನು ಮಂಜು ಪಾವಗಡ ನೋಡಿದ್ದಾರೆ. ಆ ಕ್ಷಣದಿಂದ ದಿವ್ಯಾ ಸುರೇಶ್​ರಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಬಗ್ಗೆ ಬೇಸರಗೊಂಡಿದ್ದ ದಿವ್ಯಾ ಮೊನ್ನೆ ರಾತ್ರಿ ಮಂಜು ಬಳಿ ಬಂದು ಶಮಂತ್​ ಜಾಗದಲ್ಲಿ ಯಾರೇ ಇದ್ದರೂ ಇದೇ ರೀತಿ ಮಾಡುತ್ತಿದ್ದೆ ಎಂದು ಹೇಳಿಕೊಂಡರು.

ಮಂಜು, ನೀನು ಮಾಡಿದ್ದು ತಪ್ಪು ಎಂದು ಒಪ್ಪಿಕೋ ಎಂದರೂ ದಿವ್ಯಾ ಇದನ್ನು ಒಪ್ಪಿಕೊಂಡಿಲ್ಲ. ‘ನೀನು ಮೊದಲಿನಂತೆ ಇಲ್ಲ’ ಎಂದು ಮಂಜುಗೆ ದಿವ್ಯಾ ನೇರವಾಗಿ ಹೇಳಿದ್ದಾರೆ. 'ನಾನು ಮೊದಲಿನಂತೆ ಇರೋಕೆ ಸಾಧ್ಯವೇ ಇಲ್ಲ. ನನ್ನ ಜತೆ ಮಾತನಾಡುವುದೇ ಬೇಡ' ಎಂದು ಮಂಜು ಹೇಳಿದ್ದಾರೆ. ಇದು ದಿವ್ಯಾಗೆ ಮತ್ತಷ್ಟು ನೋವು ತರಿಸಿದೆ.

ಮಂಜು

ಕೊನೆಗೆ 'ಮಂಜು ನಾನು ನಿನ್ನ ಬಳಿ ಕ್ಷಮೆ ಕೇಳುತ್ತಿದ್ದೇನೆ. ಸಾರಿ' ಎಂದರು ದಿವ್ಯಾ. ಆದರೆ, ಮಂಜು ಕ್ಷಮೆ ಬೇಡ ಎಂದು ನೇರವಾಗಿಯೇ ಹೇಳಿದರು. 'ನಂಗೆ ಈ ಮನೆ ಸಾಕಾಗಿದೆ. ತುಂಬಾನೇ ಹಿಂಸೆ ಆಗುತ್ತಿದೆ. ನಾಳೆಯಿಂದ ನನ್ನ ಜತೆ ಮಾತನಾಡಬೇಡ. ದಯವಿಟ್ಟು ನನ್ನ ಜತೆಗಿನ ಮಾತು ನಿಲ್ಲಿಸು. ಈ ವಾರ ನಾನೇ ಮನೆಯಿಂದ ಹೊರ ಹೋಗುತ್ತೇನೆ. ನೀನು ಮಾತನಾಡೋದನ್ನು ನಿಲ್ಲಿಸಿದರೆ ನಿನ್ನ ಅಭಿಮಾನಿಗಳು ನನಗೆ ವೋಟ್​ ಮಾಡೋದು ನಿಲ್ಲಿಸುತ್ತಾರೆ' ಎಂದಿದ್ದಾರೆ ದಿವ್ಯಾ ಸುರೇಶ್.

ನಂತರ ಬೆಳಗ್ಗೆ ಎದ್ದ ಬಳಿಕ, ಶುಭಪೂಂಜಾ ಬಳಿ ಮಂಜು ಪಾವಗಡ ರಾತ್ರಿ ನಡೆದ ಸನ್ನಿವೇಶವನ್ನು ವಿವರಿಸಿದರು. ದಿವ್ಯಾ ಸುರೇಶ್ ಈ ರೀತಿ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದೂ ಮಂಜು ಹೇಳಿಕೊಂಡರು.

ABOUT THE AUTHOR

...view details