ಕರ್ನಾಟಕ

karnataka

ETV Bharat / sitara

ಆದಷ್ಟು ಬೇಗ ಎಲ್ಲರಿಗೂ ಒಳ್ಳೆಯ ದಿನಗಳು ಬರಲಿ : ಅದಿತಿ ಪ್ರಭುದೇವ

ನಟಿ ಆದಿತಿ ಪ್ರಭುದೇವ, ಅಕ್ಷಯ ತೃತೀಯ ಹಬ್ಬದ ಅಂಗವಾಗಿ ‌ಮನೆಯಲ್ಲಿ ಚೆಂದದ ರಂಗೋಲಿಯನ್ನು ಬಿಡಿಸಿ, ವಿಶೇಷ ಪೂಜೆ ಮಾಡಿದ್ದಾರೆ. ಈ ಕೊರೊನಾದಿಂದ ಆದಷ್ಟು ಬೇಗ ಎಲ್ಲರಿಗೂ ಒಳ್ಳೆಯ ದಿನಗಳು ಬರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

By

Published : May 15, 2021, 12:08 PM IST

aditi prabhudeva
ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ಸ್ಯಾಂಡಲ್​ವುಡ್​ನಲ್ಲಿ, ವಿಭಿನ್ನ ಸಿನಿಮಾ ಮೂಲಕ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟಿ. ಸದ್ಯ ಸಿನಿಮಾ ಶೂಟಿಂಗ್ ಇಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಶ್ಯಾನೇ ಟಾಪಗೌಳೆ ಖ್ಯಾತಿಯ ನಟಿ ಆದಿತಿ ಪ್ರಭುದೇವ ಸೋಷಿಯಲ್ ಮೀಡಿಯಾದಲ್ಲಿ, ಹೊಸ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಆ್ಯಕ್ಟಿವ್ ಆಗಿದ್ದಾರೆ‌.

ನಟಿ ಅದಿತಿ ಪ್ರಭುದೇವ ಟ್ವೀಟ್​

ಸದ್ಯ ಕೊರೊನಾದಿಂದಾಗಿ ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗಿ ನೂರಾರು ಜನ,‌ ಈ ಹೆಮ್ಮಾರಿಗೆ ಬಲಿಯಾಗ್ತಾ ಇದ್ದಾರೆ. ಹೀಗಾಗಿ ಆದಿತಿ ಪ್ರಭುದೇವ, ಅಕ್ಷಯ ತೃತೀಯ ಹಬ್ಬದ ಅಂಗವಾಗಿ ‌ಮನೆಯಲ್ಲಿ ಚೆಂದದ ರಂಗೋಲಿಯನ್ನು ಬಿಡಿಸಿ, ವಿಶೇಷ ಪೂಜೆ ಮಾಡಿದ್ದಾರೆ. ಈ ಕೊರೊನಾ ದೂರವಾಗಿ ಆದಷ್ಟು ಬೇಗ ಎಲ್ಲರಿಗೂ ಒಳ್ಳೆಯ ದಿನಗಳು ಬರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಬರೆದುಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ ವಿಡಿಯೋ

ಇದನ್ನೂ ಓದಿ:ಮೇ 17ರಿಂದ ವಿನೂತನ ಧಾರಾವಾಹಿ 'ಕೃಷ್ಣ ಸುಂದರಿ' ಪ್ರಾರಂಭ..

ತೋತಾಪುರಿ, ಓಲ್ಡ್ ಮಂಕ್, ಆನ, ತ್ರಿಬಲ್ ರೈಡಿಂಗ್, ಅದೊಂದಿತ್ತು ಕಾಲ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಅದಿತಿ ಸಿನಿಮಾಗಳು ತೆರೆಗೆ ಬರಲಿವೆ.

ABOUT THE AUTHOR

...view details