ಕಿರುತೆರೆಯಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಹೊಂದಿರುವ ನಟ ಅನಿರುದ್ಧ್, ಇತ್ತೀಚೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ವಿಚಾರವಾಗಿ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಅವರನ್ನ ಭೇಟಿಯಾಗಿ ಕಸದ ಸ್ವಚ್ಛತೆ ಬಗ್ಗೆ ಚರ್ಚೆ ಮಾಡಿ ಗಮನ ಸೆಳೆದಿದ್ದರು.
ಆದರೆ ಬೆಂಗಳೂರಿನ ಪ್ರತೀ ಮನೆಗೂ ವಿದ್ಯುತ್ ಬಿಲ್, ನೀರಿನ ಬಿಲ್ ರೀತಿಯಲ್ಲೇ ಕಸದ ಬಿಲ್ ಪಡೆಯಲು ವಿಶೇಷ ಆಯುಕ್ತ ರಣದೀಪ್ ತಿಳಿಸಿದ್ದಾರೆ. ಪ್ರತೀ ಮನೆಗೆ ಇನ್ನೂರು ರೂಪಾಯಿಯಂತೆ ಶುಲ್ಕ ಪಡೆಯಲು ಸರ್ಕಾರವೇ ಅನುಮೋದನೆ ನೀಡಿದೆ.