ಕರ್ನಾಟಕ

karnataka

By

Published : Jan 1, 2021, 4:09 PM IST

ETV Bharat / opinion

ಕೋವಿಡ್-19 ಲಸಿಕೆ ತಯಾರು: ಪೂರ್ವಭಾವಿ 'ಮಹಾಯಜ್ಞ'ಕ್ಕೆ ಭರದ ಸಿದ್ಧತೆ

ಭಾರತ್ ಬಯೋಟೆಕ್ (ಕೊವಾಕ್ಸಿನ್) ಮತ್ತು ಸೀರಮ್ ಇನ್​ಸ್ಟಿಟ್ಯೂಟ್ (ಕೋವಿಶೀಲ್ಡ್) ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿವೆ. ಈ ಬೆಳವಣಿಗೆಗಳ ಮಧ್ಯೆ, ಸಾರ್ವತ್ರಿಕ ಕೋವಿಡ್ -19 ಲಸಿಕೆಗಾಗಿ ಮುಂಚಿತ ಸಿದ್ಧತೆಗಳ ಅಂಗವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ "ಡ್ರೈ ರನ್" ನಡೆಸಿತು.

ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಮಾರಕ ಕೋವಿಡ್ -19 ಸಾಂಕ್ರಾಮಿಕವನ್ನು ಮಿಲೇನಿಯಮ್ ಕಾಯಿಲೆ ಎಂದೇ ಬಣ್ಣಿಸಲಾಗುತ್ತಿದೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಗಂಭೀರ ಸವಾಲನ್ನು ಒಡ್ಡಿದೆ. ಹಾಗೆಯೇ ಹೆಚ್ಚಿನ ದೇಶಗಳ ಆರೋಗ್ಯ ಮತ್ತು ಅಭಿವೃದ್ಧಿಯ ಗುರಿಗಳನ್ನು ಬುಡಮೇಲು ಮಾಡಿದೆ.

ಕ್ಷಿಪ್ರ ಸಮಯದಲ್ಲಿ ಪ್ರಪಂಚದಾದ್ಯಂತ ಹಬ್ಬಿದ ಈ ಸಾಂಕ್ರಾಮಿಕ ರೋಗವು 18 ಲಕ್ಷ ಜನರನ್ನು ಸಾವಿನ ದವಡೆಗೆ ತಳ್ಳಿದೆ. ಅಮೆರಿಕಾ ಮತ್ತು ಬ್ರಿಟನ್​ನಲ್ಲಿ ಸಾವಿನ ನರ್ತನ ಇನ್ನೂ ಮುಂದುವರೆದಿದೆ. ಅದರ ವ್ಯಾಪಕ ವಿನಾಶದ ನಡುವೆಯೂ ಲಸಿಕೆ ತಯಾರಿಸಲು ಸಂಶೋಧನೆಯು ಯುದ್ಧೋಪಾದಿಯಲ್ಲಿ ನಡೆದಿದೆ. ಕೋವಿಡ್-19 ಲಸಿಕೆ ನೀಡಲು ಕೆಲವು ದೇಶಗಳು ಈಗಾಗಲೇ ಹಸಿರು ನಿಶಾನೆ ತೋರಿವೆ.

ಭಾರತ್ ಬಯೋಟೆಕ್ (ಕೊವಾಕ್ಸಿನ್) ಮತ್ತು ಸೀರಮ್ ಇನ್​ಸ್ಟಿಟ್ಯೂಟ್ (ಕೋವಿಶೀಲ್ಡ್) ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿವೆ. ಈ ಬೆಳವಣಿಗೆಗಳ ಮಧ್ಯೆ, ಸಾರ್ವತ್ರಿಕ ಕೋವಿಡ್ -19 ಲಸಿಕೆಗಾಗಿ ಮುಂಚಿತ ಸಿದ್ಧತೆಗಳ ಅಂಗವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ "ಡ್ರೈ ರನ್" ನಡೆಸಿತು.

ದೇಶದ ನಾಲ್ಕು ಪ್ರದೇಶಗಳನ್ನು ಆಯ್ದ ನಾಲ್ಕು ರಾಜ್ಯಗಳ ಪ್ರತಿ ಎರಡು ಜಿಲ್ಲೆಗಳ ಫಲಾನುಭವಿಗಳಿಗೆ ಲಸಿಕೆ ನೀಡುವುದು ಕೇಂದ್ರದ ಡ್ರೈ ರನ್ ಲಸಿಕೆ ಚಾಲನೆಯ ಉದ್ದೇಶವಾಗಿದೆ. ಸರ್ಕಾರದ ಇಲಾಖೆಗಳು ಲಸಿಕೆ ನೀಡಲು ತಯಾರಾಗಿರುವ ಕಾರ್ಯಕ್ಷಮತೆ ಮತ್ತು ಡಿಜಿಟಲ್ ಐಟಿ ಸೈಟ್‌ನಲ್ಲಿರುವ ಕೊರತೆಗಳನ್ನು ಕಂಡುಹಿಡಿಯಲು ಕೂಡ ಇದು ಉಪಯುಕ್ತವಾಗುತ್ತದೆ.

ಇದು ಅಕ್ಷರಶಃ ಮಹಾಯಜ್ಞವಾಗಲಿದೆ. ಈ ಸಂಶೋಧನೆಯ ಅಡಿಯಲ್ಲಿ ಲಸಿಕೆಯನ್ನು ಸುಮಾರು 29,000 ಕೋಲ್ಡ್ ಚೈನ್ ಕೇಂದ್ರಗಳಲ್ಲಿ ಸ್ಥಾಪಿಸಲಾದ 86,000 ಕೋಲ್ಡ್ ಸ್ಟೋರೇಜ್ ಯಂತ್ರಗಳಲ್ಲಿ ಸಂಗ್ರಹಿಸಲಾಗುತ್ತದೆ. ಲಸಿಕೆ ಸರಿಯಾದ ಸಮಯದಲ್ಲಿ ಅಗತ್ಯವಿರುವ ಸ್ಥಳಗಳಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಂಘಟಿತ ಪ್ರಯತ್ನದಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ತನ್ನ ಸರದಿ ಯಾವಾಗ ಬರುತ್ತದೆ ಮತ್ತು ಎಲ್ಲಿ ಲಸಿಕೆ ನೀಡಲಾಗುವುದು ಎಂದು ಎಸ್‌ಎಂಎಸ್ ಮೂಲಕ ತಿಳಿಸಬೇಕಾಗುತ್ತದೆ. ಪ್ರತಿಕೂಲ ಪ್ರತಿಕ್ರಿಯೆಗಳನ್ನು ಕಂಡುಹಿಡಿಯುವುದು ಮತ್ತು ಅವುಗಳ ಸೂಕ್ಷ್ಮಾತಿ ಸೂಕ್ಷ ವಿವರಗಳನ್ನು ಪಡೆದುಕೊಳ್ಳುವುದು ಉದ್ವೇಗದಿಂದ ಕೂಡಿದ ಕ್ಷಣಗಳಿಂದ ತುಂಬಿರುತ್ತದೆ. ಇವೆಲ್ಲವನ್ನೂ ಗಮನಿಸಿದರೆ, 23 ಸಚಿವಾಲಯಗಳ ಸಮನ್ವಯದೊಂದಿಗೆ ಕೇಂದ್ರವು ಕೈಗೊಂಡ ಲಸಿಕೆ ನೀಡುವ ಸಿದ್ಧತೆ ಅಭೂತಪೂರ್ವ ಕಾರ್ಯಾಚರಣೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಸಾಮೂಹಿಕ ಲಸಿಕೆ ನೀಡುವ ಕಾರ್ಯಾಚರಣೆಯನ್ನು ನಡೆಸುವಲ್ಲಿ ಭಾರತವು ಹಲವಾರು ದಶಕಗಳ ಅನುಭವವನ್ನು ಹೊಂದಿದೆ. ಲಸಿಕೆ ಕ್ಷೇತ್ರದಲ್ಲಿ ಪಡೆದ ಅಪಾರ ಅನುಭವದ ಹೊರತಾಗಿಯೂ, ಕೋವಿಡ್ -19 ವ್ಯಾಕ್ಸಿನೇಷನ್‌ನಲ್ಲಿ ದೇಶವು ಕಠಿಣ ಸವಾಲನ್ನು ಎದುರಿಸಲಿದೆ.

ಆದ್ಯತೆಯ ವ್ಯಾಕ್ಸಿನೇಷನ್​ಗಾಗಿ, ಸರ್ಕಾರವು 2 ಕೋಟಿ ಮುಂಚೂಣಿ ಕೊರೊನಾ ವಾರಿಯರ್ಸ್​ನ್ನು ಗುರುತಿಸಿದೆ. 50 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಇನ್ನೂ 28 ಕೋಟಿ ಜನರು ದೀರ್ಘಕಾಲದ ಸಹ-ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ದೇಶದ 681 ಜಿಲ್ಲೆಗಳಲ್ಲಿ ಸುಮಾರು 50,000 ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಉದ್ದೇಶಿತ ಲಸಿಕೆಗಳಿಗೆ ಅನುಮತಿ ನೀಡಿದ ಕೂಡಲೇ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು.

82 ಲಕ್ಷ ಸಾರ್ವತ್ರಿಕ ಲಸಿಕೆ ವಿತರಿಸುವ ಕೇಂದ್ರಗಳು ಈಗಾಗಲೇ ಲಭ್ಯವಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಲಸಿಕೆ ವಿತರಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಥವಾ ಇನ್ನೂ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಕೇಂದ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕಾಲದಲ್ಲಿ, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಕಂಡುಹಿಡಿಯಲು ವರ್ಷಗಳು ಹಿಡಿಯುತ್ತವೆ . ಆದಾಗ್ಯೂ ಬಯೋಟೆಕ್ ಸಂಸ್ಥೆಗಳು ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಸಮಯದ ವಿರುದ್ಧವೇ ಸ್ಪರ್ಧಿಸುತ್ತಿವೆ.

ಮೂರನೇ ಹಂತದ ಪರೀಕ್ಷೆಯಲ್ಲಿ ಲಸಿಕೆಗಳನ್ನು ಸಾವಿರಾರು ಜನರ ಮೇಲೆ ಪರೀಕ್ಷಿಸಲಾಗಿದೆ. ಲಕ್ಷಾಂತರ ಜನರಿಗೆ ಲಸಿಕೆ ನೀಡಿದಾಗ ಕೆಲವರಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆಯನ್ನು ನಿರಾಕರಿಸುವಂತಿಲ್ಲ. ಇಂತಹ ಪ್ರತಿಕ್ರಿಯೆಗಳು ಕೇವಲ ಲಸಿಕೆಯಿಂದಾಗಿರಬಾರದು ಎಂದು ಅಮೆರಿಕಾ ಏಜೆನ್ಸಿ ಎಫ್​ಡಿಎ ಹೇಳುತ್ತದೆ. ಲಸಿಕೆಯಿಂದ ಪ್ರತಿಕೂಲ ಪರಿಣಾಮ ಬೀರಿದವರಿಗೆ ಗರಿಷ್ಠ ಮಟ್ಟದ ವೈದ್ಯಕೀಯ ಸಹಾಯವನ್ನು ತಕ್ಷಣವೇ ಲಭ್ಯವಾಗುವಂತೆ ಮಾಡಬೇಕು. ಈ ರೀತಿಯ ಕ್ರಮಗಳಿಂದ ದೀರ್ಘಕಾಲೀನ ಅವಲೋಕನ ಸಾದ್ಯವಾಗುತ್ತದೆ ಮತ್ತು ಕಲಿಕೆಯ ಆಧಾರದ ಮೇಲೆ, ಲಸಿಕೆಯ ಸುಧಾರಣೆಗಳನ್ನು ಮಾಡಬೇಕು.

ಲಸಿಕೆಯ ಎರಡು ಡೋಸ್​ಗಳನ್ನು ದೇಶಾದ್ಯಂತ ನೀಡುವ ಸಂದರ್ಭದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದ ಶ್ರೇಣಿಯ ನೈಜ ಯುದ್ಧ ಎಂದೇ ಭಾವಿಸಲಾಗುತ್ತಿದೆ. ವೈದ್ಯಕೀಯ ಶ್ರೇಣಿ ಇಂತಹ ಯುದ್ಧಕ್ಕೆ ಸಿದ್ಧವಾಗಿರಬೇಕು, ತಂತ್ರಜ್ಞಾನದ ಬೆಂಬಲವನ್ನು ಹೊಂದಿರಬೇಕು. ಸಾಂಕ್ರಾಮಿಕವನ್ನು ಬಲವಾದ ಸಂಕಲ್ಪದೊಂದಿಗೆ ಕೊನೆಗೊಳಿಸಬೇಕು.

ABOUT THE AUTHOR

...view details