ಕರ್ನಾಟಕ

karnataka

ETV Bharat / jagte-raho

ಅತ್ತೆ ಸಾವು, ಸೊಸೆ ಸಂಭ್ರಮ, ಕೊನೆಗೆ ವಿಷಾದ... ಪೊಲೀಸರು ರಹಸ್ಯ ಭೇದಿಸಿದ್ದು ಹೇಗೆ?

ಮುಂಬೈ: ಅತ್ತೆ ಸಾವನ್ನು ಸಂಭ್ರಮಿಸಿದ ಸೊಸೆ ಕೊನೆಗೆ ಹತ್ಯೆಗೆ ಗುರಿಯಾಗಿರುವ ಘಟನೆ ಪಶ್ಚಿಮ ಮಹಾರಾಷ್ಟ್ರದ ಜುನಾರಾಜ್​ವಾಡ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

By

Published : Mar 14, 2019, 7:02 PM IST

ಕೊಲೆ ಆರೋಪಿ

ಮಾರ್ಚ್​ 9ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತೆ ಮಾಲತಿ ಮೃತಪಟ್ಟಿದ್ದಾರೆ. ಇನ್ನು ಆಕೆಯ ಸೊಸೆ ಶುಭಂಗಿ ಲೋಖಂಡೆ (35)ಗೆ ಆನಂದದಿಂದ ಸಂಭ್ರಮಿಸಿದ್ದಾಳೆ. ಅತ್ತೆ ಸಾವಿನ ಸುದ್ದಿಯನ್ನು ಮನಸ್ಸಿನಲ್ಲಿ ಸಂಭ್ರಮಿಸಿದ ಆಕೆ ಮಾತುಗಳಿಂದ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಳು. ಇದು ತಾಯಿ ಕಳೆದುಕೊಂಡ ಮಗನಿಗೆ ಬೇಸರವಾಗಿತ್ತು.

ಪೊಲೀಸ್​ ಅಧಿಕಾರಿ ಸುದ್ದಿಗೋಷ್ಠಿ

ಹೆಂಡ್ತಿ ಶುಭಂಗಿ ವರ್ತನೆ ಕಂಡ ಗಂಡ ಮತ್ತು ಮಗ ಆಕೆಯ ಮೇಲೆ ಕೋಪಗೊಂಡಿದ್ದರು. ಬಳಿಕ ಹೆಂಡ್ತಿ ಶುಭಂಗಿಯನ್ನು ಎರಡನೇ ಅಂತಸ್ತಿಗೆ ಕರೆದ್ಯೊಯ್ದ ಗಂಡ, ಆಕೆಯನ್ನು ಮೇಲಿನಿಂದ ತಳ್ಳಿ ಹತ್ಯೆ ಮಾಡಿದ್ದನು. ‘ಅತ್ತೆ ಸಾವಿನ ಸುದ್ದಿ ತಾಳದೇ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಳು’ ಎಂದು ಸ್ಥಳೀಯ ಮಾಧ್ಯಮದಲ್ಲಿ ಈ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಈ ಅನುಮಾನಸ್ಪದ ಸಾವಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರಿಂದ ವಾಸ್ತವ ಬೆಳಕಿಗೆ ಬಂದಿದೆ.

ABOUT THE AUTHOR

...view details