ಕರ್ನಾಟಕ

karnataka

ETV Bharat / jagte-raho

ಭೀಕರ ರಸ್ತೆ ಅಪಘಾತ, ಲಾರಿ ಭಸ್ಮ, ಕಾರು ಚಿಂದಿ... ಮಗನ ಅಕ್ಷರಾಭ್ಯಾಸಕ್ಕೆ ತೆರಳಿದವರ ಸ್ಥಿತಿ!?

ಕುಟುಂಬವೊಂದು ಮಗನ ಅಕ್ಷರಾಭ್ಯಾಸಕ್ಕೆಂದು ಹೈದರಾಬಾದ್​ನಿಂದ ನಿರ್ಮಲ್​ ಜಿಲ್ಲೆಯ ಬಾಸರದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

By

Published : Jun 27, 2019, 5:23 PM IST

Updated : Jun 27, 2019, 6:31 PM IST

ಭೀಕರ ರಸ್ತೆ ಅಪಘಾತ

ಕಾಮಾರೆಡ್ಡಿ( ತೆಲಂಗಾಣ)​: ಹೌದು, ಮಗ ಅಭಿರಾಮ್ ಅಕ್ಷರಾಭ್ಯಾಸಕ್ಕೆಂದು ರಾಕೇಶ್​ ತನ್ನ ಕುಟುಂಬ ಸದ್ಯಸರಾದ ರಘುರಾಂ (33), ಸುನೀತಾ (31), ರಮಾದೇವಿ (50) ಜೊತೆ ಸೇರಿ ಆದಿಲಾಬಾದ್​ ಜಿಲ್ಲೆಯ ಬಾಸರದಲ್ಲಿರುವ ಸರಸ್ವತಿ ದೇವಾಲಯಕ್ಕೆ ತೆರಳಿದ್ದರು. ಆದ್ರೆ ಕಾಮಾರೆಡ್ಡಿ ಜಿಲ್ಲೆಯ ಅಡ್ಲೂರು ಎಲ್ಲಾರೆಡ್ಡಿ ಕ್ರಾಸಿಂಗ್​ ಬಳಿ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್​ ಎದುರಗಡೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು ಕಾರಿನಲ್ಲಿದ್ದವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ರಾಕೇಶ್​ ಮತ್ತು ಅಭಿರಾಮ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ರಾಕೇಶ್​ ಪರಿಸ್ಥಿತಿ ತೀವ್ರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆಗಾಗಿ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜಾಗಿದ್ದು, ಲಾರಿ ಸುಟ್ಟು ಭಸ್ಮಗೊಂಡಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 27, 2019, 6:31 PM IST

ABOUT THE AUTHOR

...view details