ಕರ್ನಾಟಕ

karnataka

By

Published : Nov 4, 2019, 11:17 AM IST

ETV Bharat / international

ನದಿಗೆ ಉರುಳಿ ಬಿದ್ದ ಬಸ್​​​​​... 3 ತಿಂಗಳ ಮಗು ಸೇರಿ 17 ಪ್ರಯಾಣಿಕರು ನೀರುಪಾಲು!

ತುಂಬಿ ಹರಿಯುತ್ತಿರುವ ನದಿಗೆ ಬಸ್​ ಉರುಳಿ ಬಿದ್ದಿದ್ದು, 17 ಜನ ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ಕೃಪೆ: Twitter

ಕಠ್ಮಂಡು:ಬಸ್​ ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿರುವ ನದಿಗೆ ಉರುಳಿ ಬಿದ್ದಿದ್ದು, 17 ಪ್ರಯಾಣಿಕರು ನೀರುಪಾಲಾಗಿರುವ ಘಟನೆ ಕಠ್ಮಂಡುವಿನಲ್ಲಿ ನಡೆದಿದೆ.

ದೊಲ್ಖಾ ಜಿಲ್ಲೆಯಿಂದ ಕಠ್ಮಂಡುವಿಗೆ ಬಸ್​ವೊಂದು ತೆರಳುತ್ತಿತ್ತು. ಮಹಿಳೆಯರೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದ ಬಸ್ ಚಾಲಕನ​ ನಿಯಂತ್ರ ತಪ್ಪಿ 100 ಮೀಟರ್​ ಮೇಲಿನಿಂದ ತುಂಬಿ ಹರಿಯುತ್ತಿದ್ದ ಸುಂಕೋಶಿ ನದಿಗೆ ಬಿದ್ದಿದೆ. ಅಪಘಾತದಲ್ಲಿ ಮೂರು ತಿಂಗಳ ಮಗು ಸೇರಿದಂತೆ 17 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಕಠ್ಮಂಡು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ 48ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 48 ಮಂದಿ ಗಾಯಳುಗಳ ಪೈಕಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details