ಕರ್ನಾಟಕ

karnataka

By

Published : Sep 26, 2021, 4:34 PM IST

ETV Bharat / international

ನಾಳೆಯಿಂದ ಭಾರತ-ಕೆನಡಾ ವಿಮಾನ ಸೇವೆ ಪುನಾರಂಭ

ಭಾರತದಲ್ಲಿ ಕೋವಿಡ್ ಎರಡನೇ ಅಲೆ​ ಉಲ್ಬಣಿಸಿದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್​ನಲ್ಲಿ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನಗಳನ್ನು ನಿರ್ಬಂಧಿಸಿದ್ದ ಕೆನಡಾ, ಇದೀಗ ವಿಮಾನ ಸೇವೆ ಪುನಾರಂಭಿಸಲು ಅವಕಾಶ ಮಾಡಿಕೊಟ್ಟಿದೆ.

ಭಾರತದ ಮೇಲಿನ ಪ್ರಯಾಣ ನಿರ್ಬಂಧ ತೆಗೆದುಹಾಕಿದ ಕೆನಡಾ
ಭಾರತದ ಮೇಲಿನ ಪ್ರಯಾಣ ನಿರ್ಬಂಧ ತೆಗೆದುಹಾಕಿದ ಕೆನಡಾ

ಒಟ್ಟಾವಾ (ಕೆನಡಾ): ಐದು ತಿಂಗಳ ಬಳಿಕ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿರುವ ಜಸ್ಟಿನ್ ಟ್ರೂಡೊ ನೇತೃತ್ವದ ಕೆನಡಾ ಸರ್ಕಾರ ನಾಳೆಯಿಂದ (ಸೋಮವಾರ) ಭಾರತದ ವಿಮಾನಗಳು ಕೆನಡಾಗೆ ಹಾರಾಟ ನಡೆಸಬಹುದು ಎಂದು ತಿಳಿಸಿದೆ.

"ಸೆಪ್ಟೆಂಬರ್ 27, 2021 ರಿಂದ, ಭಾರತದಿಂದ ಕೆನಡಾಕ್ಕೆ ವಿಮಾನ ಸೇವೆ ಪುನಾರಂಭಗೊಳ್ಳಲಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆನಡಾಕ್ಕೆ ಪ್ರಯಾಣಿಸಬಹುದು. ಭಾರತದಿಂದ ಬರುವ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಮೋದಿತ ಪ್ರಯೋಗಾಲಯದಿಂದ ಕೋವಿಡ್​ ನೆಗೆಟಿವ್​ ರಿಪೋರ್ಟ್​ ತೆಗೆದುಕೊಂಡು ಬರಬೇಕು. ಈ ವರದಿಯು ನಿರ್ಗಮನಕ್ಕೆ 18 ಗಂಟೆಗಳಿಗಿಂತ ಮುಂಚಿತವಾಗಿ ಪಡೆದಿರಬೇಕು" ಎಂದು ಕೆನಡಾ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Petrol, Diesel prices today: ಪೆಟ್ರೋಲ್ ದರ ಸ್ಥಿರ, ಡೀಸೆಲ್ ಬೆಲೆಯಲ್ಲಿ ಏರಿಕೆ

ಭಾರತದಲ್ಲಿ ಕೋವಿಡ್ ಎರಡನೇ ಅಲೆ​ ಉಲ್ಬಣ ಹಿನ್ನೆಲೆ ಕಳೆದ ಏಪ್ರಿಲ್​ನಲ್ಲಿ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನಗಳನ್ನು ಕೆನಡಾ ನಿರ್ಬಂಧಿಸಿತ್ತು. ವೈರಸ್​ ಆರ್ಭಟ ತಗ್ಗಿದರೂ ವಿಮಾನ ಸೇವೆ ಪುನಾರಂಭದ ದಿನಾಂಕ ಮುಂದೂಡುತ್ತಾ ಬಂದಿದ್ದ ಕೆನಡಾ, ಇದೀಗ ನಿರ್ಬಂಧ ಹಿಂಪಡೆದಿದ್ದು, ಸೆ.30 ರಿಂದ ಏರ್ ಇಂಡಿಯಾ ವಿಮಾನ ಕೆನಡಾಗೆ ಹಾರಾಟ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ABOUT THE AUTHOR

...view details