ಕರ್ನಾಟಕ

karnataka

By

Published : Sep 7, 2019, 11:53 AM IST

ETV Bharat / city

ಕಂಠೀರವ ಅಥ್ಲೆಟಿಕ್ ಕ್ರೀಡಾಂಗಣ ಖಾಸಗಿ ಸುಪರ್ದಿಗೆ: ಕ್ರೀಡಾ ಇಲಾಖೆ ವಿರುದ್ಧ ಪ್ರತಿಭಟನೆ

ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸ್ಥಾಪಿತವಾದ ಕಂಠೀರವ ಕ್ರೀಡಾಂಗಣವನ್ನು ಜೆಎಸ್​ಡಬ್ಲ್ಯೂ​​ ಫುಟ್‌ಬಾಲ್‌ ಸಂಸ್ಥೆ ಸುಪರ್ದಿಗೆ ನೀಡಲು ಹೊರಟಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿರುದ್ಧ ಜಯ ಕರ್ನಾಟಕ ಸಂಘಟನೆ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು.

ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

ಶಿವಮೊಗ್ಗ:ಕಂಠೀರವ ಅಥ್ಲೆಟಿಕ್ ಕ್ರೀಡಾಂಗಣವನ್ನು ಜೆಎಸ್​ಡಬ್ಲ್ಯೂ​​ ಫುಟ್‌ಬಾಲ್‌ ಸಂಸ್ಥೆ ಸುಪರ್ದಿಗೆ ನೀಡುತ್ತಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿರುದ್ಧ ಜಯ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸ್ಥಾಪಿತವಾದ ಕಂಠೀರವ ಕ್ರೀಡಾಂಗಣವನ್ನು ಜೆಎಸ್​ಡಬ್ಲ್ಯೂ​​ ಫುಟ್‌ಬಾಲ್‌ ಸಂಸ್ಥೆ ಸುಪರ್ದಿಗೆ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ನ್ಯಾಯಾಲಯವು ಇಲಾಖೆಯ ವಿರುದ್ಧವಾಗಿ ತೀರ್ಪು ನೀಡಿದ್ದು, ಇದನ್ನು ರಾಜ್ಯ ಅಥ್ಲೆಟಿಕ್ ಸಂಸ್ಥೆಗೆ ವಹಿಸಿಕೊಡಬೇಕು ಎಂದು ತಿಳಿಸಿದೆ. ಆದರೂ ಸಹ ಇದಕ್ಕೆ ಇಲಾಖೆ ಮೀನಾಮೇಷ ಎಣಿಸುತ್ತಿದೆ.

ಅಲ್ಲದೇ ಇಲ್ಲಿನ ಸಿಂಥೆಟಿಕ್ ಟ್ರ್ಯಾಕ್ ಹಾಳು ಮಾಡಲಾಗಿದ್ದು, ರಾಜ್ಯ ಸರ್ಕಾರ ಇದರ ದುರಸ್ತಿಗೆ 6 ಕೋಟಿ ರೂ ಹಣ ನೀಡಿದ್ದರೂ ಈವರೆಗೂ ಸರಿಪಡಿಸಿಲ್ಲ. ಹಾಗಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವಿರುದ್ಧ ತನಿಖೆ ನಡೆಸಬೇಕು ಹಾಗೂ ಅಥ್ಲೆಟಿಕ್​​ಗಾಗಿ ಇರುವ ಕಂಠೀರವ ಕ್ರೀಡಾಂಗಣವನ್ನು ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಸುಪರ್ದಿಗೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

ABOUT THE AUTHOR

...view details