ಕರ್ನಾಟಕ

karnataka

By

Published : Oct 22, 2021, 3:29 PM IST

ETV Bharat / city

ಸಾಧನೆ ಸಿದ್ಧಾಂತಗಳ ಬಗ್ಗೆ ಹೇಳಬೇಕು, ವೈಯಕ್ತಿಕ ನಿಂದನೆ ಮಾಡಬಾರದು: ಮುರುಗೇಶ್​​ ನಿರಾಣಿ

ನನಗೆ ಹಾನಗಲ್ ಉಸ್ತುವಾರಿ ನೀಡಿದ್ದಾರೆ. ಆದರೆ ನಾನು ಊರಲ್ಲಿ ಇರಲಿಲ್ಲ. ಹೀಗಾಗಿ ತಡವಾಗಿ ಬಂದಿದ್ದೇನೆ. ಮಾಜಿ ಸಿಎಂ ಬಿಎಸ್​​ವೈ ಜತೆ ಪ್ರಚಾರ ಕೈಗೊಳ್ಳುತ್ತೇವೆ ಎಂದು ಸಚಿವ ಮುರುಗೇಶ್​​ ನಿರಾಣಿ ಹೇಳಿದರು.

Minister Murugesh Nirani
ಮುರುಗೇಶ್ ನಿರಾಣಿ

ಹುಬ್ಬಳ್ಳಿ:ಉಪಚುನಾವಣೆಯಲ್ಲಿ ಸಾಧನೆ ಸಿದ್ದಾಂತಗಳ ಬಗ್ಗೆ ಹೇಳಬೇಕು. ಬದಲಾಗಿ ವೈಯಕ್ತಿಕ ನಿಂದನೆ ಮಾಡಬಾರದು ಎಂದು ಕೈಗಾರಿಕಾ ಸಚಿವ ಮುರುಗೇಶ್​​ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಮುರುಗೇಶ್​​ ನಿರಾಣಿ

ನಗರದಲ್ಲಿಂದು ಮಾತನಾಡಿದ ಅವರು, ನನಗೆ ಹಾನಗಲ್ ಉಸ್ತುವಾರಿ ನೀಡಿದ್ದಾರೆ. ಆದರೆ ನಾನು ಊರಲ್ಲಿ ಇರಲಿಲ್ಲ. ಹೀಗಾಗಿ ತಡವಾಗಿ ಬಂದಿದ್ದೇನೆ. ಮಾಜಿ ಸಿಎಂ ಬಿಎಸ್​​ವೈ ಜತೆ ಪ್ರಚಾರ ಕೈಗೊಳ್ಳುತ್ತೇವೆ. ವಾತಾವರಣ ಚೆನ್ನಾಗಿ ಇದೆ. ಹಾನಗಲ್​​ನಲ್ಲಿ ನಾವು ನೂರಕ್ಕೆ ನೂರರಷ್ಟು ಮುನ್ನೆಡೆಯಲ್ಲಿದ್ದೇವೆ . ಗುಪ್ತಚರ ವರದಿ ಸಹ ಹಲವು ಭಾರಿ ಸುಳ್ಳಾಗಿದೆ. ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details