ಕರ್ನಾಟಕ

karnataka

By

Published : Aug 8, 2022, 4:57 PM IST

ETV Bharat / city

ನಾನೇನು‌ ತಪ್ಪು ಮಾಡಿಲ್ಲ.. ಗಲಾಟೆಯಲ್ಲಿ ಭಾಗಿಯಾಗಿಲ್ಲ: ಸುನಾಮಿ ಕಿಟ್ಟಿ ಸ್ಟಷ್ಟನೆ

ಪಬ್​ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತ ಚೇತನ್ ಗೌಡ ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರ ಬಗ್ಗೆ ಕಿಟ್ಟಿ ಸ್ಪಷ್ಟನೆ ನೀಡಿದ್ದಾರೆ.

sunami-kitty-clarified-issue-of-assault-pub
ಸುನಾಮಿ ಕಿಟ್ಟಿ ಸ್ಟಷ್ಟನೆ

ಬೆಂಗಳೂರು : ರಿಯಾಲಿಟಿ ಶೋ ಮೂಲಕ ರಾಜ್ಯದಲ್ಲಿ ಖ್ಯಾತಿ ಪಡೆದು ಬಳಿಕ ಬಾರ್ ಗಲಾಟೆ, ಕಿಡ್ನ್ಯಾಪ್ ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿದ್ದ ಸುನಾಮಿ ಕಿಟ್ಟಿ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಪಬ್​ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತ ಚೇತನ್ ಗೌಡ ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ‌ ಪ್ರತಿಯಾಗಿ ಪ್ರಶಾಂತ್ ಎಂಬುವರಿಂದ ಪ್ರತಿ ದೂರು ದಾಖಲಾಗಿತ್ತು. ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಸುನಾಮಿ‌ ಕಿಟ್ಟಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ‌.

ಜುಲೈ 24ರ ರಾತ್ರಿ ಚರ್ಚ್ ಸ್ಟ್ರೀಟ್​ನ ಪಬ್​ವೊಂದರಲ್ಲಿ ಪಾರ್ಟಿಯಲ್ಲಿ ಸ್ನೇಹಿತ ಚೇತನ್ ಗೌಡ ಜೊತೆ ಹೋಗಿರುವಾಗ ಶ್ಯಾಂಪೇನ್ ಓಪನ್ ಮಾಡುವ ವಿಚಾರದಲ್ಲಿ‌‌ ಮಾತುಕತೆಯಾಗಿತ್ತು. ಅದು ಬೇರೆ ಏನು ಆಗಿಲ್ಲ. ಯಾವುದೇ ಗಲಾಟೆಯಲ್ಲಿ ನಾನು ಭಾಗಿಯಾಗಿಲ್ಲ. ಸ್ಟೇಷನ್ ಬೇಲ್‌ ಪಡೆದುಕೊಂಡು ಬಂದಿದ್ದೇನೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ನಾನೇನು‌ ತಪ್ಪು ಮಾಡಿಲ್ಲ

ಕಿಟ್ಟಿ ಟೀಂನಿಂದ ಪ್ರತಿದೂರು:ಘಟನೆಗೆ ಸಂಬಂಧಿಸಿದಂತೆ ಚೇತನ್ ಕಿಶೋರ್ ಎಂಬುವವರಿಂದ ಸಹ ದೂರು ದಾಖಲಾಗಿದ್ದು, 'ಶಾಂಪೇನ್ ಅವರ ಮೇಲೆ ಬಿದ್ದಿದ್ದಕ್ಕೆ ನಮ್ಮನ್ನು ಪ್ರಶ್ನಿಸಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ :ಪಬ್ ಗಲಾಟೆಯಲ್ಲಿ‌ ಮತ್ತೆ ಸುದ್ದಿಯಾದ ಸುನಾಮಿ ಕಿಟ್ಟಿ: ದೂರು ದಾಖಲು!

ABOUT THE AUTHOR

...view details