ಬೆಂಗಳೂರು :ಕೇವಲ ಟಿಪ್ಪು ಸುಲ್ತಾನ್ ಮಾತ್ರ ಅಲ್ಲ. ಬ್ರಿಟಿಷರ ವಿರುದ್ಧವಾಗಿ ಹೋರಾಟ ಮಾಡಿದವರ ವಿರುದ್ಧವಾಗಿ ಇಂದು ಬಿಜೆಪಿಯವರು ನಿಂತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ಕೈಬಿಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಬಿಜೆಪಿಯವರು ವೈಭವೀಕರಿಸುತ್ತಾರೆ.
ಟಿಪ್ಪು ವಿರುದ್ಧ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನೆಹರು, ಗಾಂಧಿ ಸೇರಿದಂತೆ ಹೋರಾಟದಲ್ಲಿ ಭಾಗವಹಿಸಿದ್ದವರನ್ನು ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷಗಳಿಗೂ ಸಿದ್ದಾಂತವಿದೆ. ಬಿಜೆಪಿಗೂ ಒಂದು ಸಿದ್ದಾಂತವಿದೆ. ಕಾಂಗ್ರೆಸ್ಗೂ ಒಂದು ಸಿದ್ದಾಂತವಿದೆ.
ಯಾವ ಸಿದ್ದಾಂತವನ್ನು ಬಿಜೆಪಿಯವರು ಹೊತ್ತುಕೊಂಡು ಹೋಗ್ತಾ ಇದ್ದಾರೆ?. ಇತಿಹಾಸದ ಬಗ್ಗೆ ತಪ್ಪಾಗಿ ಮಾತನಾಡುವವರು ಯಾರು.? ಹಿಜಾಬ್, ಟಿಪ್ಪು, ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗ ನಿಷೇಧ ಇವುಗಳು ಬಿಜೆಪಿ ಚುನಾವಣೆಯ ತಂತ್ರಗಳಾಗಿವೆ. ಇದು ಮಾಡೋದು ತಪ್ಪು ಅಂತಾ ಬಿಜೆಪಿಯವರಿಗೆ ಗೊತ್ತು. ಆದ್ರೆ, ಏನು ಮಾಡೋದು ಅಧಿಕಾರಕ್ಕೆ ಬರಬೇಕು ಅಂತಾ ಮಾಡುತ್ತಿದ್ದಾರೆ ಎಂದು ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.