ಕರ್ನಾಟಕ

karnataka

By

Published : Dec 14, 2021, 1:39 PM IST

Updated : Dec 14, 2021, 1:59 PM IST

ETV Bharat / city

ಕಾರಿನಲ್ಲಿ ಹಿಂಬಾಲಿಸಿ ಯುವತಿಯೊಂದಿಗೆ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್!

ಘಟನೆ ಸಂಬಂಧ ಅಮೃತಹಳ್ಳಿ ಠಾಣೆಗೆ ದೀಪಾ ದೂರು ನೀಡಿದ್ದರು. ಹೀಗಾಗಿ, ಅಮೃತಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಆರೋಪಿ ವಿಜಯ ಭಾರದ್ವಾಜ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

man arrested for his miss behaviour in bangalore
ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಕಾರಿನಲ್ಲಿ ಹಿಂಬಾಲಿಸಿ ಯುವತಿಯ ಜೊತೆ ಅಸಭ್ಯ ವರ್ತನೆ ತೋರಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಿಹಾರ ಮೂಲದ ವಿಜಯ್ ಭಾರದ್ವಾಜ್ ಬಂಧಿತ ಆರೋಪಿ. ಈತ ರಾಜಧಾನಿಯ ಕಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಎಂಎಸ್ ಓದುತ್ತಿದ್ದ. ಕುಡಿದ ಮತ್ತಲ್ಲಿ ಅಸಭ್ಯವಾಗಿ ವರ್ತಿಸಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿನಲ್ಲಿ ಹಿಂಬಾಲಿಸಿ ಯುವತಿಯೊಂದಿಗೆ ಅಸಭ್ಯ ವರ್ತನೆ : ಆರೋಪಿ ಅರೆಸ್ಟ್

ದೀಪಾ ಶ್ರೀಕುಮಾರ್ ಅವರ 21 ವರ್ಷದ ಮಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ. ಈತನ ಕಾಟಕ್ಕೆ ಕುಟುಂಬ ಹೈರಾಣಾಗಿತ್ತು. ಕಾರಿನಲ್ಲಿ ಮುಂದೆ ಸಾಗಿದರೂ ಹಿಂಬಾಲಿಸಿ‌ ಹಿಂಸೆ ಕೊಟ್ಟಿದ್ದ.

ಇದನ್ನೂ ಓದಿ:ರೈಲು ಸಂಚಾರ ವಿಳಂಬ.. ರಾಯಚೂರಿನಲ್ಲಿ ಪರೀಕ್ಷಾರ್ಥಿಗಳಿಂದ ಪ್ರತಿಭಟನೆ

ಘಟನೆ ಸಂಬಂಧ ಅಮೃತಹಳ್ಳಿ ಠಾಣೆಗೆ ದೀಪಾ ದೂರು ನೀಡಿದ್ದರು. ಹೀಗಾಗಿ, ಅಮೃತಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಆರೋಪಿ ವಿಜಯ ಭಾರದ್ವಾಜ್‌ನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಹಾರ ಮೂಲದ ವಿಜಯ್ ಭಾರದ್ವಾಜ್ ಬಂಧಿತ ಆರೋ

ಪ್ರಕರಣ :ಡಿಸೆಂಬರ್​ 11ರಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯ ವರ್ತನೆ ತೋರಿದ್ದ. ಆ ದಿನ ಬೆಳಗಿನ ಜಾವ 2 ರಿಂದ 4 ಗಂಟೆಯವರೆಗೆ ಆರೋಪಿ ದೀಪಾ ಶ್ರೀಕುಮಾರ್ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಿದ್ದ.

Last Updated : Dec 14, 2021, 1:59 PM IST

ABOUT THE AUTHOR

...view details