ಕರ್ನಾಟಕ

karnataka

ಕುಟುಂಬ ಸಮೇತ ಚಿತ್ರಸಂತೆಗೆ ಭೇಟಿ ನೀಡಿದ ಬಿ.ಎಸ್​.ಯಡಿಯೂರಪ್ಪ

By

Published : Mar 28, 2022, 2:59 PM IST

Updated : Mar 28, 2022, 4:42 PM IST

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬಸಮೇತರಾಗಿ ನಗರದ ಚಿತ್ರಕಲಾ ಪರಿಷತ್​ನಲ್ಲಿ ನಡೆಯುತ್ತಿರುವ ಚಿತ್ರಸಂತೆಯಲ್ಲಿ ಭಾಗವಹಿಸಿ, ಇಷ್ಟದ ಕಲಾಕೃತಿ ಖರೀದಿಸಿದರು.

chitrasante
ಯಡಿಯೂರಪ್ಪ

ಬೆಂಗಳೂರು:ಚಿತ್ರಕಲಾ ಪರಿಷತ್​ನಲ್ಲಿ ‌ನಡೆಯುತ್ತಿರುವ ಚಿತ್ರಸಂತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಸಮೇತರಾಗಿ‌ ಆಗಮಿಸಿ ಚಿತ್ರಸಂತೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಸ್ವಾಗತಿಸಿದರು. ನಂತರ ಕುಮಾರಪಾರ್ಕ್ ರಸ್ತೆಯ ಇಕ್ಕೆಲಗಳಲ್ಲಿ ಇಡಲಾಗಿದ್ದ ಕಲಾಕೃತಿಗಳನ್ನು ವೀಕ್ಷಿಸಿ, ತಮಗಿಷ್ಟವಾದ ಒಂದು ಕಲಾಕೃತಿಯನ್ನು ಕೊಂಡುಕೊಂಡರು.


ಬಳಿಕ ಮಾತನಾಡಿದ ಯಡಿಯೂರಪ್ಪ, ಕೊರೊನಾ ಕಾರಣದಿಂದ 2 ವರ್ಷ ಚಿತ್ರಸಂತೆ ಮಾಡಿಲ್ಲ. ಈಗ ಬಿ.ಎಲ್.ಶಂಕರ್ ಪ್ರಯತ್ನದಿಂದ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬಂದು ಚಿತ್ರಸಂತೆ ವೀಕ್ಷಿಸಬೇಕು. ಚಿತ್ರಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಬೆಂಬಲ ನೀಡಬೇಕು ಎಂದರು. ಇವೇ ವೇಳೆ, ಚಿತ್ರಸಂತೆಗೆ ಬಂದಿದ್ದವರು ಮಾಜಿ ಮುಖ್ಯಮಂತ್ರಿಯನ್ನು ಕಂಡು ಸೆಲ್ಫಿ, ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು.‌

ಇದನ್ನೂ ಓದಿ:ಈಶ್ವರಪ್ಪ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಬಿ.ಕೆ ಹರಿಪ್ರಸಾದ್

Last Updated : Mar 28, 2022, 4:42 PM IST

ABOUT THE AUTHOR

...view details