ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದಕ್ಕೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದಾರೆ. ಬಿಜೆಪಿ ಶಾಸಕರ ಮೇಲೂ ಕೊಳೆತ ಮೊಟ್ಟೆ ಎಸೆಯುವ ಎಚ್ಚರಿಕೆ ನೀಡಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಬೈರತಿ ಸುರೇಶ್ ಮಾತನಾಡಿ, ಬಿಜೆಪಿ ಶಾಸಕರಿಗೆ ಕೊಳೆತ ಮೊಟ್ಟೆಗಳನ್ನು ಎಸೆಯಬೇಕಾಗುತ್ತದೆ. ಮೊಟ್ಟೆ ಎಸೆದವರಿಗೆ ಬಿಜೆಪಿ ಶಾಸಕರು ಬೇಲ್ ಕೊಟ್ಟು ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಯಾಕೆ ಆ ಬಿಜೆಪಿ ಶಾಸಕರು ಮನೆಬಿಟ್ಟು ಹೊರಗೆ ಬರಲ್ವಾ? ಎಂದು ಪ್ರಶ್ನಿಸಿದರು.
ಮಡಿಕೇರಿ ಶಾಸಕರು ಬೆಂಗಳೂರಿಗೆ ಬರೋದಿಲ್ವಾ?, ಬೆಂಗಳೂರಿಗೆ ಬಂದಾಗ ಮೊಟ್ಟೆಯಿಂದ ಹೊಡೆಯುವುದಕ್ಕೆ ನಮಗೆ ಬರಲ್ವಾ?. ಅವರಿಗೆ ಒಳ್ಳೆಯ ಮೊಟ್ಟೆಯಲ್ಲ, ಕೊಳೆತ ಮೊಟ್ಟೆಯಲ್ಲಿಯೇ ಹೊಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಿಜ್ವಾನ್ ಅರ್ಷದ್ ಎಚ್ಚರಿಕೆ:ನಾವು ಕೈಯಲ್ಲಿ ಮೊಟ್ಟೆ ಎತ್ತಿಕೊಂಡರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ ಎಂದು ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದರು. ನಮಗೆ ಶಕ್ತಿ ಇಲ್ಲ ಎಂದು ಇಲ್ಲಿ ಸೇರಿಲ್ಲ, ಗಾಂಧಿ ತತ್ವಕ್ಕೆ ಸೇರಿದವರು. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ ನಾಯಕರ ಪ್ರತಿಭಟನೆ