ಆನೇಕಲ್: 500 ರೂಪಾಯಿ ವ್ಯವಹಾರಕ್ಕಾಗಿ ಸ್ನೇಹಿತನನ್ನೇ ಕೊಚ್ಚಿ ಕೊಲೆಗೈದಿರು ಪ್ರಕರಣ ಅತ್ತಿಬೆಲೆ ರಸ್ತೆಯ ದಿನ್ನೂರು ಕ್ರಾಸ್ನಲ್ಲಿ ನಡೆದಿದೆ.
ಕೇವಲ 500 ರೂ. ವ್ಯವಹಾರ ವಿಚಾರ: ಸ್ನೇಹಿತನನ್ನೇ ಕೊಡಲಿಯಿಂದ ಕೊಚ್ಚಿದ ಪಾಪಿ!
500 ರೂಪಾಯಿ ವ್ಯವಹಾರಕ್ಕಾಗಿ ಸ್ನೇಹಿತನನ್ನೇ ಕೊಚ್ಚಿ ಕೊಲೆಗೈದಿರುವ ಪ್ರಕರಣ ಆನೇಕಲ್ ತಾಲೂಕಲ್ಲಿ ನಡೆದಿದೆ.
ಕೊಡಲಿಯಿಂದ ಕೊಚ್ಚಿ ವ್ಯಕ್ತಿ ಕೊಲೆ
ಶಂಕರಯ್ಯ (48) ಕೊಲೆಯಾದವನು ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರದ ಮದನಪಲ್ಲಿಯವನಾದ ಶಂಕರಯ್ಯ, ತನ್ನ ಸ್ನೇಹಿತನಾದ ಮುನಿರತ್ನಮ್ ಜೊತೆ ಐನೂರು ರೂಪಾಯಿ ವ್ಯವಹಾರ ನಡೆಸಿದ್ದ. ಹಣದ ವಿಷಯಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ದಿನ್ನೂರು ಕ್ರಾಸ್ ಬಳಿ ನಿಂತಿದ್ದ ಶಂಕರಯ್ಯನನ್ನು ಟಿವಿಎಸ್ನಲ್ಲಿ ಹಿಂಬಾಲಿಸಿದ್ದ ಮುನಿರತ್ನಮ್, ಕೈಲಿದ್ದ ಕೊಡಲಿಯಿಂದ ಶಂಕರಯ್ಯನ ತಲೆಗೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.