ಕರ್ನಾಟಕ

karnataka

By

Published : Oct 22, 2019, 7:12 PM IST

ETV Bharat / city

18 ಜಿಲ್ಲೆಯ 49 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ

ರಾಜ್ಯದ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬರ ಪೀಡಿತ ತಾಲೂಕು

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ವರದಿ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್..

ಯಾವ ಜಿಲ್ಲೆಯ ಯಾವ ತಾಲೂಕುಗಳು ಬರಪೀಡಿತ?

  1. ಬೆಂ.ನಗರ - ಆನೇಕಲ್, ಬೆಂ.ಉತ್ತರ ಹಾಗೂ ಬೆಂ.ಪೂರ್ವ ತಾಲೂಕು
  2. ಬೆಂ.ಗ್ರಾಮಾಂತರ - ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
  3. ರಾಮನಗರ - ಕನಕಪುರ, ರಾಮನಗರ
  4. ಕೋಲಾರ - ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
  5. ಚಿಕ್ಕಬಳ್ಳಾಪುರ - ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
  6. ತುಮಕೂರು - ಗುಬ್ಬಿ,ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
  7. ಚಿತ್ರದುರ್ಗ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
  8. ದಾವಣಗೆರೆ - ಜಗಳೂರು
  9. ಚಾಮರಾಜನಗರ - ಕೊಳ್ಳೇಗಾಲ
  10. ಬಳ್ಳಾರಿ - ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
  11. ಕೊಪ್ಪಳ - ಗಂಗಾವತಿ
  12. ರಾಯಚೂರು - ಮಾನ್ವಿ, ರಾಯಚೂರು, ಸಿಂಧನೂರು
  13. ಕಲಬುರಗಿ - ಚಿಂಚೋಳಿ, ಜೇವರ್ಗಿ, ಸೇಡಂ
  14. ಯಾದಗಿರಿ - ಯಾದಗಿರಿ
  15. ಬೆಳಗಾವಿ - ಅಥಣಿ
  16. ಬಾಗಲಕೋಟೆ - ಬಾದಾಮಿ, ಬೀಳಗಿ, ಜಮಖಂಡಿ
  17. ವಿಜಯಪುರ - ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
  18. ಗದಗ - ನರಗುಂದ

ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್, ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್​ಗೆ 150/100 ವಿಸ್ತೀರ್ಣದ ಜಮೀನನನ್ನು ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ.‌ ಹಣವನ್ನು ಕ್ಲಬ್ ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರೂ. ಸರ್ಕಾರಕ್ಕೆ ಕ್ಲಬ್ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

ABOUT THE AUTHOR

...view details