ಕರ್ನಾಟಕ

karnataka

By

Published : Jul 19, 2020, 8:25 PM IST

ETV Bharat / city

ರೈಲ್ವೆ ಹಳಿಗೆ ಬಿದ್ದು ಯುವಕ ಸಾವು

ಯುವಕನೋರ್ವ ರೈಲು ಹಳಿ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಬಳ್ಳಾರಿ ನಗರದ ಮೊದಲನೇ ರೈಲ್ವೆ ಗೇಟ್​ ಬಳಿ ನಡೆದಿದ್ದು, ಸದ್ಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ..

youth-dies-after-falling-into-railway-track-in-bellary
ರೈಲ್ವೆ ಹಳಿಗೆ ಬಿದ್ದು ಯುವಕ ಸಾವು

ಬಳ್ಳಾರಿ :ರೈಲು ಹಳಿ ಮೇಲೆ ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಗರದ ಮೊದಲನೇ ರೈಲ್ವೆ ಗೇಟ್ ಹತ್ತಿರ ನಡೆದಿದೆ.

ಅನಿಲ್‌ಕುಮಾರ್ (28 ವರ್ಷ) ತಂದೆ ಶ್ರೀರಾಮುಲು ಮೃತ ಯುವಕ. ಸದ್ಯ ಯುವಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ರೈಲ್ವೆ ಪೊಲೀಸರು ದೂರವಾಣಿ ಮೂಲಕ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details