ಬಳ್ಳಾರಿ: ಡಿ.ಎ.ಆರ್. ಮೈದಾನದಲ್ಲಿ ನಡೆದ ಕಬ್ಬಡ್ಡಿ, ವಾಲಿಬಾಲ್, ಗುಂಡು ಎಸೆತ, ತಟ್ಟೆ ಎಸೆತ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಜಿಲ್ಲಾ ಪೊಲೀಸರು ಭಾಗವಹಿಸಿ, ತಮ್ಮ ಆಟ ಪ್ರದರ್ಶಿಸಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ: ಆಟ ಆಡಿ ಸಂಭ್ರಮಿಸಿದ ಆರಕ್ಷಕರು
ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಟಾಕೂಟದಲ್ಲಿ ಆರಕ್ಷಕರಿಂದ ಆಟ ಪ್ರದರ್ಶನ. ಡಿ.ಎ.ಆರ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೊಲೀಸರು ಭಾಗಿ.
ಕಬ್ಬಡಿಯ ಮೊದಲನೇ ಸೆಮಿಫೈನಲ್ನಲ್ಲಿ ಡಿ.ಎ.ಆರ್ 7 ಅಂಕ ಮತ್ತು ಹೊಸಪೇಟೆ ತಂಡಗಳು 21 ಅಂಕ ಗಳಿಸಿದವು. ಆದ್ರೆ ಕೊನೆಗೆ ಹೊಸಪೇಟೆ ತಂಡ 14 ಅಂಕಗಳಿಂದ ಜಯಗಳಿಸಿತು. ಎರಡನೇ ಸೆಮಿಫೈನಲ್ನಲ್ಲಿ ಬಳ್ಳಾರಿ ಗ್ರಾಮಾಂತರ ಠಾಣೆಯು ಬಳ್ಳಾರಿ ನಗರ ಠಾಣೆ ವಿರುದ್ಧ 3 ಅಂಕಗಳಿಂದ ಜಯಿಸಿತು. ಗ್ರಾಮಾಂತರ ತಂಡದಲ್ಲಿ ಕರಿವೀರ ಉತ್ತಮ ಪದರ್ಶನ ನೀಡಿದರು. ನಾಳೆ ಬೆಳಿಗ್ಗೆ ಬಳ್ಳಾರಿ ಗ್ರಾಮಾಂತರ ತಂಡ ಮತ್ತು ಹೊಸಪೇಟೆ ತಂಡಗಳ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ.
1500 ಮೀಟರ್ ಓಟದ ಸ್ಪರ್ಧೆಗೆ ಎಸ್.ಎಸ್ ನಕುಲ್ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು. 45 ವರ್ಷದ ಒಳಗಿನ ಲಿಪಿಕ ಸಿಬ್ಬಂದಿಗೆ ನಡಿಗೆ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು, ಇದರಲ್ಲಿ ಹೊನ್ನಪ್ಪ ಪ್ರಥಮ ಸ್ಥಾನ, ರವಿಕುಮಾರ್ ದ್ವಿತೀಯಸ್ಥಾನ, ವಿನಯ್ ಕುಮಾರ್ ತೃತೀಯ ಸ್ಥಾನ ಪಡೆದುಕೊಂಡರು.