ಕರ್ನಾಟಕ

karnataka

ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕ ನೀರು ಪಾಲು: ಮುಂದುವರೆದ ಶೋಧ

By

Published : Aug 26, 2022, 2:18 PM IST

ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕ ನೀರು ಪಾಲು ಆಗಿರುವ ಘಟನೆ ನಡೆದಿದೆ.

Young man drowned Krishna River
ಸಾಗರ ರಾಜು ಹೊನಕಟ್ಟಿ

ಅಥಣಿ: ಯುವಕನೋರ್ವ ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವುದಕ್ಕೆ ಹೋಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿ ಸಾಗರ ರಾಜು ಹೊನಕಟ್ಟಿ (23) ನೀರು ಪಾಲಾದ ಯುವಕ.

ಇಂದು ಶ್ರಾವಣ ಶುಕ್ರವಾರ ಕೊನೆ ದಿನವಾಗಿದ್ದರಿಂದ ಹಲ್ಯಾಳ ಗ್ರಾಮದ ಪಕ್ಕದ ಕೃಷ್ಣ ನದಿಯಲ್ಲಿ ನಾಲ್ಕೈದು ಸ್ನೇಹಿತರ ಜೊತೆಗೂಡಿ ಸ್ನಾನಕ್ಕೆ ತೆರಳಿದಾಗ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ಸ್ಥಳಕ್ಕೆ ಅಥಣಿ ಪೊಲೀಸರು, ಅಗ್ನಿಶಾಮಕ ದಳ ಧಾವಿಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯುವಕ ನೀರು ಪಾಲು: ಮುಂದುವರೆದ ಶೋಧ

ಇದನ್ನೂ ಓದಿ:ಹುಲಿಹೈದರ ಗಲಾಟೆ ಪ್ರಕರಣ.. ಪಿಐ ಸೇರಿ ನಾಲ್ವರ ಅಮಾನತು

ABOUT THE AUTHOR

...view details