ಕರ್ನಾಟಕ

karnataka

ಏನ್​ ಸೆಕೆನಪ್ಪಾ...! ಶತಮಾನಗಳ ರೆಕಾರ್ಡ್​​ ಬ್ರೇಕ್​​ ಮಾಡಿದ ಉರಿ ಬಿಸಿಲು

By

Published : May 30, 2019, 4:43 PM IST

Updated : May 30, 2019, 4:49 PM IST

ಒಂದೆಡೆ ನೀರಿನ ಹಾಹಾಕಾರ...ಮತ್ತೊಂದೆಡೆ ನೆತ್ತಿ ಮೇಲೆ ಸುಡುವ ಸೂರ್ಯನ ಪ್ರತಾಪ.. ಹೀಗಾಗಿ ಜನ - ಜಾನುವಾರುಗಳು ಕಂಗಾಲಾಗಿವೆ. ಈ ಮಧ್ಯೆ,  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಮುಟ್ಟಿದೆ.

ಉರಿ ಬಿಸಿಲು

ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ನಿತ್ಯವೂ ಸೂರ್ಯನ ಕಿರಣಗಳ ಪ್ರಖರತೆ ಜಾಸ್ತಿ ಆಗ್ತಾನೇ ಇದೆ. ಇದರಿಂದಾಗಿ ಮಾನವ ಅಷ್ಟೇ ಏಕೆ ಪ್ರಾಣಿ ಪಕ್ಷಿಗಳು ಬದುಕುವುದು ಕಷ್ಟವಾಗಿದೆ. ಎಷ್ಟೋ ಹಳ್ಳಿಗಳು ನೀರಿಲ್ಲದೇ ಪರದಾಡ್ತಿವೆ.

ಒಂದೆಡೆ ನೀರಿನ ಹಾಹಾಕಾರ...ಮತ್ತೊಂದೆಡೆ ನೆತ್ತಿ ಮೇಲೆ ಸುಡುವ ಸೂರ್ಯನ ಪ್ರತಾಪ.. ಹೀಗಾಗಿ ಜನ - ಜಾನುವಾರುಗಳು ಕಂಗಾಲಾಗಿವೆ. ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಮುಟ್ಟಿದೆ. ಇದು ಶುಕ್ರವಾರದ ವೇಳೆಗ 47 ಡಿಗ್ರಿ ಸೆಲ್ಸಿಯಸ್​​ಗೂ ತಲುಪಿದರೂ ಅಚ್ಚರಿಯಿಲ್ಲ.

ಬುಧವಾರ ದೆಹಲಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ಪ್ರಕಾರ ದೆಹಲಿಯಲ್ಲಿ ಮುಂದಿನ ಐದು ದಿನಗಳಲ್ಲಿ ಸುಮಾರು 45- 46 ಡಿಗ್ರಿ ಸೆಲ್ಸಿಯಸ್​ ಇರಲಿದೆ ಎಂದು ಮುನ್ಸೂಚನೆ ನೀಡಿದೆ.

ಇನ್ನು ಉತ್ತರಪ್ರದೇಶ, ವಿದರ್ಭ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹೈದರಾಬಾದ್​ ಕರ್ನಾಟಕ ಮತ್ತು ಜಾರ್ಖಂಡ್​ , ಬಿಹಾರಗಳಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ..

ಕಲಬುರಗಿಯಲ್ಲಿ ಶತಮಾನದ ದಾಖಲೆ ತಾಪಮಾನ ದಾಖಲು :
ಕಳೆದ 107 ವರ್ಷಗಳ ಹಿಂದೆ ಕಲಬುರಗಿಯಲ್ಲಿ 45.4 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು ಎಂದು ಹೇಳಲಾಗುತ್ತಿದೆ. ಈಗ ಆ ದಾಖಲೆ ಪುಡಿ ಪುಡಿಯಾಗಿದ್ದು, ಗರಿಷ್ಠ ತಾಪಮಾನ 45.6 ಡಿಗ್ರಿ ಸೆಲ್ಸಿಯಸ್​​ಗೆ ಮುಟ್ಟಿತ್ತು ಎಂದು ವರದಿಯಾಗಿದೆ.

ಈ ವರ್ಷವಂತೂ ಹೈದರಾಬಾದ್​ ಕರ್ನಾಟಕದಲ್ಲಿ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತಲೇ ಹೋಗುತ್ತಿದೆ. ಹೀಗಾಗಿ ಇಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಶಾಲೆ ಆರಂಭವನ್ನ 15 ದಿನಗಳ ಕಾಲ ಮುಂದೂಡಿದ್ದಾರೆ.

Last Updated : May 30, 2019, 4:49 PM IST

ABOUT THE AUTHOR

...view details