ಕರ್ನಾಟಕ

karnataka

ಸಿಎಸ್​ಕೆ ಸೇರಿಕೊಂಡ ಕ್ಯಾಪ್ಟನ್​ ಧೋನಿ ​... ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಶ್ರೇಯಸ್​

ಮೊದಲ ಸ್ಥಾನಕ್ಕಾಗಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ ಮುಖಾಮುಖಿಯಾಗುತ್ತಿವೆ.​ ಟಾಸ್​ಗೆದ್ದ ಡೆಲ್ಲಿ ತಂಡ ಬೌಲಿಂಗ್​ ಆಯ್ದುಕೊಂಡಿದೆ.

By

Published : May 1, 2019, 7:41 PM IST

Published : May 1, 2019, 7:41 PM IST

ETV Bharat / briefs

ಸಿಎಸ್​ಕೆ ಸೇರಿಕೊಂಡ ಕ್ಯಾಪ್ಟನ್​ ಧೋನಿ ​... ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಶ್ರೇಯಸ್​

dd

ಚೆನ್ನೈ: ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಡೆಲ್ಲಿ ತಂಡ ಬೌಲಿಂಗ್​ ಆಯ್ದುಕೊಂಡಿದೆ.

12 ನೇ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು 4 ಪಂದ್ಯಗಳಲ್ಲಿ ಸೋಲನುಭವಿಸಿರುವ ಎರಡು ತಂಡಗಳಿಗೂ ಈ ಪಂದ್ಯ ಪಲಿತಾಂಶದಿಂದ ಯಾವುದೇ ತೊಂದರೆಯಿಲ್ಲ. ಆದರೆ ಮೊದಲೆರಡು ಸ್ಥಾನ ಪಡೆದವರಿಗೆ ಮೊದಲ ಕ್ವಾಲಿಫೈರ್​ನಲ್ಲಿ ಸೋತರು ಎರಡನೇ ಕ್ವಾಲಿಫೈರ್​ನಲ್ಲಿ ಪಾಲ್ಗೊಳ್ಳುವ ಅವಕಾಶವಿರುದರಿಂದ ಈ ಪಂದ್ಯ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬದ್ರಪಡಿಸಿಕೊಳ್ಳಲು ಈ ಪಂದ್ಯ ಮಹತ್ವ ಪಡೆದುಕೊಂಡಿದೆ.

ಅನಾರೋಗ್ಯಕ್ಕೆ ತುತ್ತಾಗಿರುವ ಧೋನಿ ಈ ಪಂದ್ಯದಲ್ಲೂ ಕಳೆದ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತವರಿನಲ್ಲೇ ಮುಗ್ಗರಿಸಿರುವ ಸಿಎಸ್​ಕೆ ಇಂದು ಡೆಲ್ಲಿ ವಿರುದ್ಧ ಗೆದ್ದ ಅಗ್ರಸ್ಥಾನಕ್ಕೇರುವ ಆಲೋಚನೆಯಲ್ಲಿದೆ. ಇತ್ತ ಡೆಲ್ಲಿ ಗೆಲುವಿನ ಓಟವನ್ನು ಮುಂದುವರಿಸಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಆಲೋಚನೆಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್:

​​ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ಕಾಲಿನ್ ಇಂಗ್ರಾಮ್, ರಿಷಬ್ ಪಂತ್, ಅಕ್ಷರ್ ಪಟೇಲ್, ಅಮಿತ್​ ಮಿಶ್ರಾ, ರುದರ್​ಫರ್ಡ್​, ಟ್ರೆಂಟ್​ ಬೌಲ್ಟ್​, ಸಂದೀಪ್ ಲಾಮಿಚಾನೆ, ಜಗದೀಶ್​ ಸುಚಿತ್​

ಚೆನ್ನೈ ಸೂಪರ್ ಕಿಂಗ್ಸ್​:

ಎಂಎಸ್​ ಧೋನಿ( ನಾಯಕ),ಅಂಬಾಟಿ ರಾಯುಡು, ಫಾಫ್ ​ಡು ಪ್ಲೆಸಿಸ್​, ಶೇನ್​ ವಾಟ್ಸನ್​, ಕೇದಾರ್​ ಜಾದವ್​, ರವೀಂದ್ರ ಜಡೇಜಾ, ದೀಪಕ್​ ಚಹಾರ್​, ಇಮ್ರಾನ್​ ತಾಹಿರ್​, ಸುರೇಶ್​ ರೈನಾ , ಡ್ವೇನ್​ ಬ್ರಾವೋ, ಹರಭಜನ್​ ಸಿಂಗ್​

ABOUT THE AUTHOR

...view details