ಕರ್ನಾಟಕ

karnataka

By

Published : May 5, 2021, 6:56 PM IST

ETV Bharat / bharat

ವಿದೇಶಿ ನೆರವಿನ ಮಾಹಿತಿಯನ್ನು ಕೇಂದ್ರ ಮುಚ್ಚಿಡುತ್ತಿರುವುದೇಕೆ? ರಾಹುಲ್ ಪ್ರಶ್ನೆ

ಭಾರತದಲ್ಲಿ ಹೆಚ್ಚಾಗಿರುವ ನಿರುದ್ಯೋಗದ ಬಗ್ಗೆ ಸಿಎಂಐಇ ವರದಿಯಲ್ಲಿ ಹೇಳಿತ್ತು. ಇದನ್ನೇ ಉಲ್ಲೇಖಿಸಿದ್ದ ರಾಹುಲ್, ಕೇಂದ್ರ ಸರ್ಕಾರವು ಕೋವಿಡ್ ವಿರುದ್ಧದ ಹೋರಾಟದಲ್ಲಿ ವಿಫಲವಾಗಿದೆ ಎಂದಿದ್ದರು. "ಉದ್ಯೋಗವಿಲ್ಲ, ವ್ಯಾಕ್ಸಿನೂ ಇಲ್ಲ. ಜನತೆ ಕೊರೊನಾ ವೈರಸ್​ ಹಾವಳಿಯಿಂದ ಕಂಗಾಲಾಗಿದ್ದಾರೆ. ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ." ಎಂದು ರಾಹುಲ್ ಟ್ವೀಟ್ ಮಾಡಿದ್ದರು.

Why no transparency in COVID foreign aid data: Rahul Gandhi
ವಿದೇಶಿ ನೆರವಿನ ಮಾಹಿತಿಯನ್ನು ಕೇಂದ್ರ ಮುಚ್ಚಿಡುತ್ತಿರುವುದೇಕೆ? .. ರಾಹುಲ್ ಪ್ರಶ್ನೆ

ನವದೆಹಲಿ:ಕೋವಿಡ್​-19 ಸಂಕಷ್ಟದಲ್ಲಿ ದೇಶಕ್ಕೆ ಸಹಾಯ ಮಾಡಲು ವಿದೇಶಗಳು ನೀಡಿದ ನೆರವಿನ ಮಾಹಿತಿಯನ್ನು ಕೇಂದ್ರ ಸರ್ಕಾರ ಮುಚ್ಚಿಡುತ್ತಿರುವುದೇಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ವಿಶ್ವಾದ್ಯಂತದಿಂದ ಭಾರತಕ್ಕೆ ನೆರವಿನ ರೂಪದಲ್ಲಿ ಬಂದಿರುವ ವೈದ್ಯಕೀಯ ಸಹಾಯದ ಬಗ್ಗೆ ಭಾರತ ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲವೇಕೆ ಎಂದೂ ಅವರು ಕೇಳಿದ್ದಾರೆ.

ವಿದೇಶಿ ನೆರವಿನ ಮಾಹಿತಿಯನ್ನು ಕೇಂದ್ರ ಮುಚ್ಚಿಡುತ್ತಿರುವುದೇಕೆ? .. ರಾಹುಲ್ ಪ್ರಶ್ನೆ

"ಕೋವಿಡ್ ನೆರವಿನ ಬಗ್ಗೆ ಉದ್ಭವಿಸುವ ಪ್ರಶ್ನೆಗಳು: ಭಾರತಕ್ಕೆ ಏನೇನು ನೆರವು ಹರಿದು ಬಂದಿದೆ? ಅದೆಲ್ಲ ಈಗ ಎಲ್ಲಿದೆ? ಅದರಿಂದ ಯಾರಿಗೆಲ್ಲ ಪ್ರಯೋಜನವಾಗಿದೆ? ಅದು ರಾಜ್ಯಗಳಿಗೆ ಯಾವ ಪ್ರಮಾಣದಲ್ಲಿ ಹಂಚಿಕೆಯಾಗಿದೆ? ಪಾರದರ್ಶಕತೆ ಏಕಿಲ್ಲ? ಭಾರತ ಸರ್ಕಾರದ ಬಳಿ ಈ ಬಗ್ಗೆ ಏನಾದರೂ ಉತ್ತರವಿದೆಯೇ?" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಭಾರತದ ಆರ್ಥಿಕತೆ ನಿಗಾ ಕಮೀಟಿ (Centre for Monitoring Indian Economy -CMIE) ನೀಡಿದ ವರದಿಯನ್ನು ಉಲ್ಲೇಖಿಸಿ ಇಂದು ಮಧ್ಯಾಹ್ನ ಕೂಡ ರಾಹುಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಭಾರತದಲ್ಲಿ ಹೆಚ್ಚಾಗಿರುವ ನಿರುದ್ಯೋಗದ ಬಗ್ಗೆ ಸಿಎಂಐಇ ವರದಿಯಲ್ಲಿ ಹೇಳಿತ್ತು. ಇದನ್ನೇ ಉಲ್ಲೇಖಿಸಿದ್ದ ರಾಹುಲ್, ಕೇಂದ್ರ ಸರ್ಕಾರವು ಕೋವಿಡ್ ವಿರುದ್ಧದ ಹೋರಾಟದಲ್ಲಿ ವಿಫಲವಾಗಿದೆ ಎಂದಿದ್ದರು.

ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

"ಉದ್ಯೋಗವಿಲ್ಲ, ವ್ಯಾಕ್ಸಿನೂ ಇಲ್ಲ. ಜನತೆ ಕೊರೊನಾ ವೈರಸ್​ ಹಾವಳಿಯಿಂದ ಕಂಗಾಲಾಗಿದ್ದಾರೆ. ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ." ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ABOUT THE AUTHOR

...view details