ಕರ್ನಾಟಕ

karnataka

ETV Bharat / bharat

ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಮಾನದಲ್ಲಿ ಅನುಚಿತ ವರ್ತನೆ.. ಸಿಬ್ಬಂದಿಗೆ ಥಳಿಸಿ, ಅರಬೆತ್ತಲಾಗಿ ಓಡಾಡಿದ ಮಹಿಳೆ

ವಿಸ್ತಾರಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಹೈಡ್ರಾಮಾ ಸೃಷ್ಟಿಸಿದ್ದಾರೆ. ಸಿಬ್ಬಂದಿಯನ್ನು ಥಳಿಸಿ, ಅರೆಬೆತ್ತಲೆಯಾಗಿ ಓಡಾಟ ನಡೆಸಿ, ವಿಮಾನದಲ್ಲಿ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.

By

Published : Jan 31, 2023, 12:12 PM IST

Vistara restrain unruly passenger  Abu Dhabi to Mumbai flight  unruly passenger on Abu Dhabi to Mumbai flight  ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಮಾನ  ವಿಮಾನದಲ್ಲಿ ಮಹಿಳೆ ದುರ್ವರ್ತನೆ  ಮಹಿಳಾ ಪ್ರಯಾಣಿಕರೊಬ್ಬರು ಹೈಡ್ರಾಮಾ  ವಿಮಾನದಲ್ಲಿ ಅನುಚಿತವಾಗಿ ವರ್ತಿಸಿರುವ ಘಟನೆ ಮುನ್ನೆಲೆಗೆ  ವಿಮಾನದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆ  ಸಿಬ್ಬಂದಿ ಮೇಲೆ ಹಲ್ಲೆ  ಸಹ ಪ್ರಯಾಣಿಕರಿಗೆ ತೊಂದರೆ  ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನ
ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆ ದುರ್ವರ್ತನೆ

ಮುಂಬೈ, ಮಹಾರಾಷ್ಟ್ರ: ವಿಮಾನದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆಗಳು ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಇಟಲಿಯ 45 ವರ್ಷದ ಮಹಿಳೆಯೊಬ್ಬರು ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿರುವುದು ತಿಳಿದುಬಂದಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ವಿಮಾನದಲ್ಲಿ ಅರೆಬೆತ್ತಲೆಯಾಗಿ ಸಂಚರಿಸುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ಕೊಡುವಂತೆ ವರ್ತಿಸಿರುವ ಘಟನೆ ನಡೆದಿದೆ. ಹೀಗೆ ಅರೆಬೆತ್ತಲಾಗಿ ಓಡಾಡಿದ ಮಹಿಳೆಯನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಸೋಮವಾರ (ಜನವರಿ 30) ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಎಕಾನಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡ ಮಹಿಳೆಯೊಬ್ಬರು ಬ್ಯುಸಿನೆಸ್ ಕ್ಲಾಸ್​ ನಲ್ಲಿ ಕೂರುವುದಾಗಿ ಹಠ ಹಿಡಿದಿದ್ದರು ಎನ್ನಲಾಗಿದೆ. ಅದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಅಷ್ಟೇ ಅಲ್ಲ ಆ ಮಹಿಳೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಳಿಕ ವಿಮಾನದಲ್ಲಿ ಅರೆಬೆತ್ತಲೆಯಾಗಿ ಹಿಂದೆ ಮುಂದೆ ಸಂಚರಿಸಿದ್ದಾರೆ ಎಂಬ ಗಂಭೀರ ಆರೋಪ ಕೂಡಾ ಕೇಳಿ ಬಂದಿದೆ.

ಪ್ರಕರಣದ ಬಗ್ಗೆ ವಿಸ್ತಾರ ವಿಮಾನಯಾನ ಸಂಸ್ಥೆ ಹೇಳಿದ್ದಿಷ್ಟು:ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರು ಕಿವಿಗೊಡದ ಕಾರಣ ಕ್ಯಾಪ್ಟನ್ ವಾರ್ನಿಂಗ್ ಕಾರ್ಡ್ ನೀಡಿದ್ದಾರೆ. ನಂತರ ಸಿಬ್ಬಂದಿ ಮಹಿಳೆಯನ್ನು ತಡೆದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನ ಲ್ಯಾಂಡ್ ಆದ ನಂತರ ಅವರನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಆ ನಂತರ ಮುಂಬೈ ಪೊಲೀಸರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಮಹಿಳೆ ಅನುಚಿತ ಮತ್ತು ಹಿಂಸಾತ್ಮಕ ನಡವಳಿಕೆಯಿಂದಾಗಿ ಆ ಮಹಿಳಾ ಪ್ರಯಾಣಿಕರನ್ನು ಬಂಧಿಸಬೇಕಾಯಿತು. ಆ ಬಳಿಕ ನಿಯಮಾನುಸಾರ ಘಟನೆಯ ಕುರಿತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ. ಅವರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ವಿಸ್ತಾರಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ವಿಮಾನ ಪ್ರಯಾಣಿಕರಿಂದ ಅನುಚಿತ ವರ್ತನೆಯ ಘಟನೆಗಳು ಸುದ್ದಿಯಲ್ಲಿ ಕೇಳಿಬರುತ್ತಿವೆ. ಏರ್ ಇಂಡಿಯಾ ವಿಮಾನಗಳಲ್ಲಿ ಮೂತ್ರ ವಿಸರ್ಜಿಸುವ ಘಟನೆಗಳು ನಡೆಯುತ್ತಿದ್ದರೆ, ಇತ್ತೀಚೆಗೆ ಕೆಲವು ಪ್ರಯಾಣಿಕರು ವಿಮಾನದ ತುರ್ತು ಬಾಗಿಲುಗಳನ್ನು ಗಾಳಿಯಲ್ಲಿ ತೆರೆಯಲು ಪ್ರಯತ್ನಿಸಿದ್ದರು ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು. ಈ ರೀತಿ ಘಟನೆಗಳು ಸಹ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟುಮಾಡಿದ್ದವು. ಈ ಘಟನೆಗಳ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಕ್ರಮ ಕೈಗೊಂಡಿದ್ದು, ಮೂತ್ರ ವಿಸರ್ಜನೆ ಘಟನೆಗಳಿಗಾಗಿ ಏರ್ ಇಂಡಿಯಾಗೆ ದಂಡ ಸಹ ವಿಧಿಸಲಾಗಿದೆ.

ದುಬೈನಿಂದ ಆಕ್ಲೆಂಡ್​ಗೆ ಹೊರಟಿದ್ದ ವಿಮಾನ :ಜನವರಿ 27ರಂದು ಬೆಳಗ್ಗೆ 10.30ಕ್ಕೆ ದುಬೈನಿಂದ ಆಕ್ಲೆಂಡ್​ಗೆ EK448 ವಿಮಾನ ಟೇಕ್​ ಆಫ್​ ಆಗಿತ್ತು. ಸುಮಾರು 9000 ಮೈಲಿಗಳಷ್ಟು ಹಾರಾಟ ನಡೆಸಿದ ವಿಮಾನ ಆಕ್ಲೆಂಡ್​ನ ಹವಾಮಾನ ವೈಪರೀತ್ಯದಿಂದಾಗಿ ಮರಳಿ ದುಬೈನ ಏರ್​ಪೋರ್ಟ್​ಗೆ ಮಧ್ಯರಾತ್ರಿ ಮರಳಿತ್ತು. ಆಕ್ಲೆಂಡ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಕ್ಲೆಂಡ್​ನ ವಿಮಾನ ನಿಲ್ದಾಣ ಜಲಾವೃತವಾಗಿತ್ತು. ಹೀಗಾಗಿ ಈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಭಾರಿ ಮಳೆಗೆ ಆಕ್ಲೆಂಡ್​ ವಿಮಾನ ನಿಲ್ದಾಣದಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಓದಿ:ಪಕ್ಷಿ ಡಿಕ್ಕಿ: ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ

ABOUT THE AUTHOR

...view details