ಕರ್ನಾಟಕ

karnataka

By

Published : Feb 5, 2022, 8:44 PM IST

ETV Bharat / bharat

ಸಮಾನತೆಯ ಪ್ರತಿಮೆ ಯುವಕರನ್ನ ಉತ್ತೇಜಿಸುತ್ತದೆ.. ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿ : ನಮೋ

ಸಮಾನತೆಯ ಪ್ರತಿಮೆ ಉದ್ಘಾಟನೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ರಾಮಾನುಜಾಚಾರ್ಯರ ಬೋಧನೆ ಸ್ಮರಿಸುವ ಪ್ರತಿಮೆ ಇದಾಗಿದ್ದು, ಎಲ್ಲ ಧರ್ಮದ ಜನರಲ್ಲಿ ಸಮಾನತೆಯ ಅರ್ಥ ಉತ್ತೇಜಿಸುತ್ತದೆ ಎಂದರು..

PM Modi inaugurates Statue of Equality
PM Modi inaugurates Statue of Equality

ಹೈದರಾಬಾದ್ ​:11ನೇ ಶತಮಾನದ ಭಕ್ತಿ ಸಂತ ಶ್ರೀರಾಮಾನುಜಾಚಾರ್ಯರನ್ನು ಸ್ಮರಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಇಂದು ಹೈದರಾಬಾದ್‌ನಲ್ಲಿ ಸಮಾನತೆಯ ಪ್ರತಿಮೆ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸಮಾನತೆಯ ಪ್ರತಿಮೆ ಯುವಕರನ್ನ ಉತ್ತೇಜಿಸುತ್ತದೆ. ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿ ಎಂದರು.

ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೆ ವ್ಯಾಪಿಸಲಿ : ನಮೋ

ಹೈದರಾಬಾದ್​ನ ಹೊರವಲಯದಲ್ಲಿರುವ ಮುಂಚಿತ್ತಾಲ್​ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿದ ನಮೋ, ವಸಂತ ಪಂಚಮಿ ದಿನ ಪ್ರತಿಮೆ ಅನಾವರಣ ಮಾಡಿದ್ದಕ್ಕಾಗಿ ಸಂತೋಷವಾಗುತ್ತದೆ. ರಾಮಾನುಜಾಚಾರ್ಯರ ಈ ಪ್ರತಿಮೆ ಅವರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಸಂಕೇತವಾಗಿದೆ.

ಈ ಪ್ರತಿಮೆ ಭಾರತದ ಪ್ರಾಚೀನ ಸಂಸ್ಕೃತಿಯನ್ನ ಮತ್ತೊಮ್ಮೆ ಬಲಪಡಿಸುತ್ತದೆ ಎಂದಿರುವ ನಮೋ, ಈ ಪ್ರತಿಮೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವುದರ ಜೊತೆಗೆ ಭಾರತದ ಪುರಾತನ ಸಂಸ್ಕೃತಿ ಬಿಂಬಿಸುತ್ತದೆ ಎಂದರು.

ಇದನ್ನೂ ಓದಿರಿ:216 ಅಡಿ ಎತ್ತರದ ರಾಮಾನುಜರ ಪ್ರತಿಮೆ ಅನಾವರಣ... ಯಜ್ಞದಲ್ಲಿ ಭಾಗಿಯಾಗಿರೋದು ನನ್ನ ಪುಣ್ಯ ಎಂದ ನಮೋ

ದಲಿತರ ಉದ್ಧಾರಕ್ಕಾಗಿ ದುಡಿದಿರುವ ಶ್ರೀರಾಮಾನುಜಾಚಾರ್ಯರು, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿ ಎಂದು ಹೋರಾಡಿದ್ದಾರೆ ಎಂದರು.

ಪ್ರತಿಮೆಯ ವಿಶೇಷತೆಗಳು

  • ಪಂಚಲೋಹದಿಂದ ನಿರ್ಮಾಣಗೊಂಡ ಪ್ರತಿಮೆಯಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತು
  • 2014ರಲ್ಲಿ ಶಂಕುಸ್ಥಾಪನೆ, 1000 ಕೋಟಿ ರೂ. ಯೋಜನೆಯಲ್ಲಿ ನಿರ್ಮಾಣ
  • ರಾಮಾನುಜಾಚಾರ್ಯರ ಅನೇಕ ಕೃತಿ, ತತ್ವ ವಿವರಿಸುವ ಶೈಕ್ಷಣಿಕ ಗ್ಯಾಲರಿ
  • ಒಟ್ಟು ಎತ್ತರ 216 ಅಡಿ ಎತ್ತರ, ರಾಮಾನುಜಾಚಾರ್ಯರ ಮೂರ್ತಿ 108 ಅಡಿ
  • ತ್ರಿದಂಡಮ್ 135 ಅಡಿ ಎತ್ತರವಾಗಿಗಿದ್ದು, ಪದ್ಮಪೀಠ 27 ಅಡಿ ಹಾಗೂ ಭದ್ರಾ ವೇದಿಕೆ 54 ಅಡಿ ಎತ್ತರ
  • ಪ್ರತಿಮೆಯಲ್ಲಿ 18 ಶಂಖಗಳು ಮತ್ತು 18 ಚಕ್ರಗಳು
  • 54 ಕಮಲದ ದಳಗಳು ಹಾಗೂ 34 ಆನೆಗಳು ಪ್ರತಿಮೆಯಲ್ಲಿ ನಿರ್ಮಾಣ

ABOUT THE AUTHOR

...view details