ಕರ್ನಾಟಕ

karnataka

By ETV Bharat Karnataka Team

Published : Sep 2, 2023, 11:46 AM IST

ETV Bharat / bharat

ಸಂಸತ್ತಿ​ನ ವಿಶೇಷ ಅಧಿವೇಶನವು ಅವಧಿ ಪೂರ್ವ ಚುನಾವಣೆ ನಿರೀಕ್ಷೆ ಹುಟ್ಟುಹಾಕಿದೆ: ನಿತೀಶ್​ ಕುಮಾರ್​

''ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು, ಲೋಕಸಭೆ ಚುನಾವಣೆ ಅವಧಿಗೂ ಮುನ್ನವೇ ನಡೆಯುವ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ'' ಎಂದು ಬಿಹಾರ ಸಿಎಂ ಮತ್ತು 'ಇಂಡಿಯಾ' ನಾಯಕ ನಿತೀಶ್ ಕುಮಾರ್ ತಿಳಿಸಿದ್ದಾರೆ. 'ಒಂದು ರಾಷ್ಟ್ರ ಒಂದು ಚುನಾವಣೆ' ಸಾಧ್ಯತೆಯನ್ನು ಅಧ್ಯಯನ ಮಾಡಲು ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಕೇಂದ್ರವು ಬದ್ಧತೆ ಪ್ರದರ್ಶಿಸಿದ ಒಂದು ದಿನದ ನಂತರ, ಜೆಡಿಯು ನಾಯಕ ಈ ಹೇಳಿಕೆ ನೀಡಿದ್ದಾರೆ.

Nitish Kumar
ಸಂಸತ್ತಿ​ನ ವಿಶೇಷ ಅಧಿವೇಶನವು ಲೋಕಸಭೆ ಚುನಾವಣೆಗೂ ನಿರೀಕ್ಷೆಗಳನ್ನು ಹುಟ್ಟಿದೆ: ಬಿಹಾರ ಸಿಎಂ ನಿತೀಶ್ ಕುಮಾರ್​

ಪಾಟ್ನಾ (ಬಿಹಾರ):ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಲೋಕಸಭೆ ಚುನಾವಣೆಯ ಮುನ್ನವೇ ಹಲವು ನಿರೀಕ್ಷೆಗಳಿಗೆ ಮನ್ನಣೆ ನೀಡಿದೆ'' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಾದಿಸಿದ್ದಾರೆ. ಮುಂಬೈನಿಂದ ಹಿಂದಿರುಗಿದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜೆಡಿಯು ನಾಯಕ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ, ವಿರೋಧ ಕೂಟ 'ಇಂಡಿಯಾ'ವು ಇತ್ತೀಚೆಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿತ್ತು.

"ಈ ವಿಶೇಷ ಅಧಿವೇಶನವು ಚುನಾವಣೆಗಳ ಮುನ್ನ ಯೋಚಿಸುವುದರ ಸಂಕೇತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಅದರ ಸಾಧ್ಯತೆಯನ್ನು ನಾನು ಸ್ವಲ್ಪ ಸಮಯದಿಂದ ಗಮನಿಸುತ್ತಿದ್ದೇನೆ ಮತ್ತು ಹಂಚಿಕೊಳ್ಳುತ್ತಿದ್ದೇನೆ" ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಮುಂಗಾರು ಅಧಿವೇಶನದ ನಂತರ ಕಳೆದ ತಿಂಗಳು ಮುಂದೂಡಲ್ಪಟ್ಟ ಸಂಸತ್ತು ಸೆಪ್ಟೆಂಬರ್ 18 ರಿಂದ 22 ರವರೆಗೆ ವಿಶೇಷ ಅಧಿವೇಶನಕ್ಕಾಗಿ ಸಭೆ ಸೇರಲಿದೆ. ಅದರ ಕಾರ್ಯಸೂಚಿಯನ್ನು ಕೇಂದ್ರವು ಬಹಿರಂಗಗೊಳಿಸಿಲ್ಲ. ಲೋಕಸಭೆಯಲ್ಲಿ 16 ಸಂಸದರನ್ನು ಹೊಂದಿರುವ ಜೆಡಿಯು ನಾಯಕ, 'ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಆದರೆ, "ಮುಂಬರುವ ಅಧಿವೇಶನದಲ್ಲಿ ಬಲವಾಗಿ ಪ್ರಸ್ತಾಪಿಸಲಾಗುವ ಸಮಸ್ಯೆಗಳಿವೆ" ಎಂದು ಅವರು ಹೇಳಿದ್ದಾರೆ.

ಜಾತಿ ಗಣತಿ ವಿಚಾರದಲ್ಲಿ ಈ ಕೇಂದ್ರ ಸರ್ಕಾರದ ಕಾಲೆಳೆಯಲಾತ್ತಿದೆ. ಜಾತಿ ಗಣತಿ ನಿಯಮಾನುಸಾರವಾಗಿ ಬಹಳ ಹಿಂದೆಯೇ ಮುಗಿಯಬೇಕಿತ್ತು. ಆದ್ರೆ, ಜನಗಣತಿಯನ್ನು ಇನ್ನೂ ಆರಂಭಿಸಿಲ್ಲ, ಉಳಿದೆಲ್ಲ ವಿಷಯಗಳಿಗೆ ಈ ಸರ್ಕಾರಕ್ಕೆ ಸಮಯವಿದೆ ಎಂದು ಅವರು ಕಿಡಿಕಾಡಿದ್ದಾರೆ.

'ಒಂದು ರಾಷ್ಟ್ರ ಒಂದು ಆದಾಯ ವ್ಯವಸ್ಥೆ ಇರಬೇಕು'- ತೇಜಸ್ವಿ:ಒಂದು ರಾಷ್ಟ್ರ ಒಂದು ಚುನಾವಣೆ ಪ್ರಶ್ನೆಗೆ ತೇಜಸ್ವಿ ಯಾದವ್ ಅವರು, ''ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಮೊದಲು ಒಂದು ರಾಷ್ಟ್ರ ಒಂದು ಆದಾಯ ವ್ಯವಸ್ಥೆಯನ್ನು ಮಾಡಬೇಕು. ಸದ್ಯ ಕೇಂದ್ರದಲ್ಲಿ ಕುಳಿತಿರುವ ಸರ್ಕಾರ ಹೇಳುತ್ತಿರುವುದು ಎಳ್ಳಷ್ಟೂ ಸೂಕ್ತವಲ್ಲ. ಎಲ್ಲಕ್ಕಿಂತ ಮೊದಲು ಒಂದು ರಾಷ್ಟ್ರ ಒಂದು ಆದಾಯಕ್ಕೆ ವ್ಯವಸ್ಥೆ ಮಾಡಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ'' ಎಂದರು. ''ಲೋಕಸಭೆ ಚುನಾವಣೆಯನ್ನು ಮುಂಚಿತವಾಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಸದ್ಯ ಏನಾಗಿದೆ ಅನ್ನೋದನ್ನು ಇಡೀ ದೇಶವೇ ನೋಡುತ್ತಿದೆ'' ಎಂದು ಅವರು, ಒನ್ ನೇಷನ್ ಒನ್ ಎಲೆಕ್ಷನ್ ಕುರಿತು ಚರ್ಚೆ ಮಾಡುತ್ತೇವೆ'' ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ:ರಾಯ್‌ಪುರಕ್ಕೆ ರಾಹುಲ್ ಗಾಂಧಿ ಭೇಟಿ: 'ರಾಜೀವ್ ಯುವ ಮಿತನ್​ ಸಮ್ಮೇಳನ'ದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಲಿರುವ ಕೈ ನಾಯಕ

ABOUT THE AUTHOR

...view details