ಕರ್ನಾಟಕ

karnataka

ಉಪವಾಸದ ವೇಳೆ ಆಂಧ್ರ ಸಿಎಂ ಸಹೋದರಿ ಶರ್ಮಿಳಾ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ​ ಅವರ ಸಹೋದರಿ ಶರ್ಮಿಳಾ ಅವರು ಉಪವಾಸ ಸತ್ಯಾಗ್ರಹದ ವೇಳೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

By

Published : Dec 11, 2022, 10:39 AM IST

Published : Dec 11, 2022, 10:39 AM IST

Updated : Dec 11, 2022, 10:51 AM IST

sharmilas-indefinite-fast-shift-her-to-hospital
ಆಂಧ್ರ ಸಿಎಂ ಜಗನ್​ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ

ಹೈದರಾಬಾದ್:ತೆಲಂಗಾಣದಲ್ಲಿ ಪಾದಯಾತ್ರೆಗೆ ಸರ್ಕಾರ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸದ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇದು ಪೊಲೀಸರ ಬಲವಂತದ ವರ್ಗಾವಣೆ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಆಂಧ್ರಪ್ರದೇಶದ ಸಿಎಂ ಜಗನ್​ಮೋಹನ್ ರೆಡ್ಡಿ​ ಅವರ ಸಹೋದರಿ ಶರ್ಮಿಳಾ ರಾಜ್ಯಾದ್ಯಂತ ಪಾದಯಾತ್ರೆಗೆ ಮುಂದಾಗಿದ್ದರು. ಆದರೆ, ಕೆಸಿಆರ್​ ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ. ಇದರಿಂದ ಕೆರಳಿದ ವೈಎಸ್‌ಆರ್‌ಟಿಪಿ ಪಕ್ಷ, ಶರ್ಮಿಳಾ ಅವರ ಸಮೇತ ಶುಕ್ರವಾರದಿಂದ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿತ್ತು.

ಉಪವಾಸ ಸತ್ಯಾಗ್ರಹ ಆರಂಭವಾಗಿ ಮೂರು ದಿನಗಳಾಗಿದ್ದು, ಕೈಬಿಡುವಂತೆ ಪೊಲೀಸರು ಹಲವು ಬಾರಿ ಮನವಿ ಮಾಡಿದ್ದರು. ಇದಕ್ಕೊಪ್ಪದೇ ಶರ್ಮಿಳಾ ಅವರು ಪಟ್ಟುಹಿಡಿದು ನೀರನ್ನೂ ಸೇವಿಸದೇ ಕಠಿಣ ಸತ್ಯಾಗ್ರಹ ನಡೆಸುತ್ತಿದ್ದರು. ಇಂದು ರಾತ್ರಿ 1 ಗಂಟೆಯ ಸುಮಾರಿಗೆ ಪೊಲೀಸರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸತ್ಯಾಗ್ರಹ ಸ್ಥಳದಿಂದ ದೂರ ಸರಿಸಿ, ಶರ್ಮಿಳಾರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಬಲವಂತದ ಕ್ರಮ, ಪಕ್ಷ ಆಕ್ರೋಶ:ಶರ್ಮಿಳಾರ ಆರೋಗ್ಯ ಹದಗೆಡುತ್ತಿರುವ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರೆ, ಇದನ್ನು ಆಕ್ಷೇಪಿಸಿರುವ ಪಕ್ಷ, ಇದು ಬಲವಂತದ ಕ್ರಮವಾಗಿದೆ. ಹೋರಾಟವನ್ನು ಹತ್ತಿಕ್ಕಲು ಶರ್ಮಿಳಾರನ್ನು ಆಸ್ಪತ್ರೆಗೆ ಒತ್ತಾಯಪೂರ್ವಕವಾಗಿ ದಾಖಲಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ನೀರನ್ನೂ ಸಹ ಸೇವಿಸದೇ ಉಪವಾಸ ಸತ್ಯಾಗ್ರಹ ನಡೆಸುತ್ತಿರು ಶರ್ಮಿಳಾರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದರು. ಆರೋಗ್ಯ ತಪಾಸಣೆಯ ವೇಳೆ ರಕ್ತದೊತ್ತಡ ಮತ್ತು ಗ್ಲೂಕೋಸ್ ಮಟ್ಟವು ತೀವ್ರ ಮಟ್ಟಕ್ಕೆ ಕುಸಿದಿರುವುದು ಗೊತ್ತಾಗಿದೆ. ಎಲೆಕ್ಟ್ರೋಲೈಟ್ ಅಸಮತೋಲವಾಗಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇತ್ತು. ಇದು ಮೂತ್ರಪಿಂಡಗಳಿಗೆ ಅಪಾಯವನ್ನುಂಟು ಮಾಡಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ವೈಎಸ್‌ಆರ್‌ಟಿಪಿ ಮತ್ತು ಟಿಆರ್​ಎಸ್​ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿತ್ತು. ಇದನ್ನು ಖಂಡಿಸಿ ಶರ್ಮಿಳಾ ಅವರು ಸಿಎಂ ಕೆಸಿಆರ್ ನಿವಾಸ ಮುತ್ತಿಗೆ ಯತ್ನ ನಡೆಸಿ, ಎರಡು ಬಾರಿ ಬಂಧಿತರಾಗಿದ್ದರು.

ಇದನ್ನೂ ಓದಿ:ದೆಹಲಿ ಮದ್ಯ ಹಗರಣ: ಇಂದು ತೆಲಂಗಾಣ ಸಿಎಂ ಪುತ್ರಿಗೆ ಸಿಬಿಐ ಡ್ರಿಲ್, ಬಿಗಿ ಭದ್ರತೆ

Last Updated : Dec 11, 2022, 10:51 AM IST

ABOUT THE AUTHOR

...view details