ಕರ್ನಾಟಕ

karnataka

By

Published : Jan 22, 2022, 3:17 PM IST

ETV Bharat / bharat

ನೂತನ ಬಸ್​ ಸಂಚಾರಕ್ಕೆ ಚಾಲನೆ ನೀಡಿ, ಡ್ರೈವರ್​​ ಆದ ಡಿಎಂಕೆ ಶಾಸಕ!

ನೂತನ ಬಸ್​ ಸಂಚಾರಕ್ಕೆ ಚಾಲನೆ ನೀಡಲು ಆಗಮಿಸಿದ್ದ ಸ್ಥಳೀಯ ಶಾಸಕರೋರ್ವರು ಸರ್ಕಾರಿ ಬಸ್​ ಚಾಲನೆ ಮಾಡಿ ಗಮನ ಸೆಳೆದಿದ್ದಾರೆ..

MLA turned as govt bus driver for a while
MLA turned as govt bus driver for a while

ಪೂಂಪುಹಾರ್​(ತಮಿಳುನಾಡು): ತಿರುವಿಡೈಕಾಳಿ-ಮೈಲಿಯಾಡುತುರೈ ನಡುವಿನ ಬಸ್​​ ಸಂಚಾರಕ್ಕೆ ಸುಮಾರು ಐದು ವರ್ಷಗಳ ನಂತರ ಇಂದು ಚಾಲನೆ ನೀಡಲಾಯಿತು. ಶಾಸಕ ನಿವೇದಾ ಮುರುಗನ್​​​ ಬಸ್​ ಸಂಚಾರಕ್ಕೆ ಚಾಲನೆ ನೀಡುವ ಜೊತೆಗೆ ಡ್ರೈವರ್​ ಆಗಿ ಕೆಲ ಹೊತ್ತು ಸೇವೆ ಸಲ್ಲಿಸಿದರು.

ಪೂಂಪುಹಾರ್​ ವಿಧಾನಸಭಾ ಕ್ಷೇತ್ರದಲ್ಲಿ ಬರುವ ತಿರುವಿಡೈಕಾಳಿ ಶಾಸಕರಾಗಿರುವ ನಿವೇದಾ ಮುರುಗನ್​​ ನೂತನ ಬಸ್​​ ಸಂಚಾರಕ್ಕೆ ಚಾಲನೆ ನೀಡಿರುವ ಬೆನ್ನಲ್ಲೇ ಪ್ರಯಾಣಿಕರನ್ನ ಹತ್ತಿಸಿಕೊಂಡು ಸುಮಾರು ಆರು ಕಿಲೋಮೀಟರ್​​ ಡ್ರೈವ್​ ಮಾಡಿದ್ದು, ಇದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ನೂತನ ಬಸ್​ ಸಂಚಾರಕ್ಕೆ ಚಾಲನೆ ನೀಡಿ, ಡ್ರೈವರ್​​ ಆದ ಡಿಎಂಕೆ ಶಾಸಕ!

ಈ ಹಿಂದೆ ಸಂಬಳ ಹೆಚ್ಚಿಸುವಂತೆ ಒತ್ತಾಯಿಸಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಕೆ.ಆರ್​. ರಾಜಕೃಷ್ಣನ್​ ಬಸ್​ ಚಾಲನೆ ಮಾಡಿ ಗಮನ ಸೆಳೆದಿದ್ದರು. ಇವರು, ಆಂಧಿಯೂರಿನಿಂದ ಭವಾನಿವರೆಗೆ ಬಸ್​​ ಡ್ರೈವ್​​ ಮಾಡಿ ಅನೇಕ ಪ್ರಯಾಣಿಕರನ್ನ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details