ಕರ್ನಾಟಕ

karnataka

By

Published : May 17, 2021, 12:31 PM IST

ETV Bharat / bharat

ಮಹಂತ್ ನರಸಿಂಹಾನಂದ್ ಹತ್ಯೆಗೆ ಸುಪಾರಿ ನೀಡಿದ್ದ ಜೆಎಎಂ ಉಗ್ರ ಸಂಘಟನೆ!

ಈ ಹಿಂದೆ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಆರೋಪದ ಮೇಲೆ ಮಹಂತ್​ ಅವರ ವಿರುದ್ಧ ಎರಡು ದೂರು ದಾಖಲಾಗಿದ್ದವು. ಇನ್ನು, ಈ ಹತ್ಯೆಯ ಹೊಂಚಿಗೂ ಇದೇ ಕಾರಣ ಎಂದು ತಿಳಿದು ಬಂದಿದೆ..

narasimhanand
ಮಹಂತ್ ನರಸಿಂಹಾನಂದ್ ಸರಸ್ವತಿ

ನವದೆಹಲಿ :ಗಾಜಿಯಾಬಾದ್​ನದಾಸ್ನಾ ದೇವಾಲಯದ ಮುಖ್ಯಸ್ಥ ಮಹಂತ್ ನರಸಿಂಹಾನಂದ್ ಸರಸ್ವತಿ ಹತ್ಯೆಗೆ ಜೈಶ್-ಎ-ಮೊಹಮ್ಮದ್ ಸಂಘಟನೆ ಸುಪಾರಿ ಕೊಟ್ಟಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಮಹಂತ್ ಅವರ ಹತ್ಯೆಗೆ ಸಂಘಟನೆಯು ಪಾಕಿಸ್ತಾನದಲ್ಲಿಯೇ ಎಲ್ಲಾ ರೀತಿಯ ಪ್ಲಾನ್​ ಮಾಡಿದ್ದು, ವಿಶೇಷ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದರು ಎನ್ನಲಾಗಿದೆ.

‘ಈ ಸಂಬಂಧ ಹತ್ಯೆ ನಡೆಸಲು ಕಾವಿ ಬಟ್ಟೆ ತೊಟ್ಟು ಮಾರು ವೇಷದಲ್ಲಿ ಆಗಮಿಸಿದ್ದ ಜಾನ್ ಮೊಹಮ್ಮದ್ ದಾರ್ ಅಲಿಯಾಸ್ ಜಹಾಂಗೀರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಆರೋಪದ ಮೇಲೆ ಮಹಂತ್​ ಅವರ ವಿರುದ್ಧ ಎರಡು ದೂರು ದಾಖಲಾಗಿದ್ದವು. ಇನ್ನು, ಈ ಹತ್ಯೆಯ ಹೊಂಚಿಗೂ ಇದೇ ಕಾರಣ ಎಂದು ತಿಳಿದು ಬಂದಿದೆ.

ಜೈಶ್​ ಸಂಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿಯಾದ ಜಾನ್ ಮೊಹಮ್ಮದ್​ಗೆ ಕೊಲೆ ಮಾಡುವಂತೆ ಸುಪಾರಿ ನೀಡಿದೆ. ಸದ್ಯ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಪಿಸ್ತೂಲ್, ಎರಡು ಮ್ಯಾಗಜೀನ್​ಗಳು, 15 ಕಾಟ್ರೇಜ್​ಗಳು, ಕೇಸರಿ ಬಣ್ಣದ ಕುರ್ತಾ ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದೆ.

ABOUT THE AUTHOR

...view details