ಕರ್ನಾಟಕ

karnataka

By

Published : Dec 22, 2022, 3:39 PM IST

ETV Bharat / bharat

ನೆರೆಯ ದೇಶಗಳ ಅನಿಶ್ಚಿತ ದಾಳಿ ತಡೆಯಲು ಇತರ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು: ವಿ ಆರ್ ಚೌಧರಿ

ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ ನಾವು ನಮ್ಮ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.

IAF chief VR Chaudhari
ವಿಆರ್ ಚೌಧರಿ

ನವದೆಹಲಿ: ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಮತ್ತು ಬಾಂಧವ್ಯವನ್ನು ಹೊಂದುವ ಮೂಲಕ, ಯಾವುದೇ ಅನಿಶ್ಚಿತ ದಾಳಿ ನಡೆಸುವ ದೇಶಗಳನ್ನು ನಾವು ಹಿಮ್ಮೆಟ್ಟಿಸಬಹುದಾಗಿದೆ ಎಂದು ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.

ನಮ್ಮ ನೆರೆಯ ದೇಶವು ಅಸ್ಥಿರ ಮತ್ತು ಅನಿಶ್ಚಿತತೆಯನ್ನು ಮುಂದುವರೆಸಿದೆ. ಇಂತಹ ಸಂದರ್ಭದಲ್ಲಿ ನಾವು ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ ನಾವು ನಮ್ಮ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಿಳಿಸಿದ್ದಾರೆ.

ದೆಹಲಿಯ ಏರ್‌ಫೋರ್ಸ್ ಆಡಿಟೋರಿಯಂನಲ್ಲಿ ಉದಯೋನ್ಮುಖ ವಿಶ್ವ ಕ್ರಮದಲ್ಲಿ ಭಾರತದ ಶ್ರೇಷ್ಠತೆಯ ಕುರಿತು ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್ (ಸಿಎಪಿಎಸ್) ಆಯೋಜಿಸಿದ್ದ 19 ನೇ ಸುಬ್ರೋತೋ ಮುಖರ್ಜಿ ಸೆಮಿನಾರ್‌ನಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ಪರಸ್ಪರ ಲಾಭದಾಯಕ ಸಂಸೇನಾ ಸಮವಸ್ತ್ರ ಧರಿಸಿ ವಂಚನೆ: ಆರೋಪಿ ಬಂಧಿಸಿದ ಎಸ್‌ಟಿಎಫ್

ಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ನಾವು ಗಣನೀಯ ಆರ್ಥಿಕ ಬಲದೊಂದಿಗೆ ಸ್ಥಿರವಾದ ದೇಶವಾಗಿ ನಮ್ಮ ಇಮೇಜ್ ಹೆಚ್ಚಿಸಿಕೊಳ್ಳಬೇಕು. ನಾವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಸ್ಪರ್ಧಾತ್ಮಕ ಯುಗದಲ್ಲಿ ಅಭಿವೃದ್ಧಿ ಹೊಂದಲು ನಾವು ನಮ್ಮದೇ ಆದ ತಂತ್ರವನ್ನು ಅಭಿವೃದ್ಧಿಪಡಿಸಬೇಕು. ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಯುಎನ್‌ನಲ್ಲಿ ಮಾತನಾಡಲಾಗಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಯಾವಾಗಲೂ ಅತಿಕ್ರಮಣ ಇರುತ್ತದೆ. ಆರೋಗ್ಯಕರ ಸ್ಪರ್ಧೆ ತುಂಬಾ ಒಳ್ಳೆಯದು ಎಂದು ಐಎಎಫ್​ ಮುಖ್ಯಸ್ಥ ವಿ ಆರ್​ ಚೌಧರಿ ಹೇಳಿದ್ದಾರೆ.

ABOUT THE AUTHOR

...view details