ಕರ್ನಾಟಕ

karnataka

By

Published : Jun 5, 2021, 8:00 PM IST

Updated : Jun 5, 2021, 8:10 PM IST

ETV Bharat / bharat

ಪತಂಜಲಿಯ ಕೊರೊನಿಲ್ ಕಿಟ್​​​​ಗೆ ವಿರೋಧ: ಕೇಂದ್ರಕ್ಕೆ ಪತ್ರ ಬರೆದ ಐಎಂಎ

ಅಲೋಪತಿ ಚಿಕಿತ್ಸೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಬಾ ರಾಮ್​ದೇವ್​ರ ಪತಂಜಲಿಯ ಕೊರೊನಿಲ್ ಕಿಟ್ ಅನ್ನು ಐಎಂಎ ಮಹಾರಾಷ್ಟ್ರ ತೀವ್ರವಾಗಿ ವಿರೋಧಿಸಿದೆ.

ima-maharashtra-opposed-the-controversial-coronil-kit-wrote-a-letter-to-center
ಪತಂಜಲಿಯ ಕೊರೊನಿಲ್ ಕಿಟ್ ವಿರೋಧಿಸಿ ಐಎಂಎ ಮಹಾರಾಷ್ಟ್ರ ಕೇಂದ್ರಕ್ಕೆ ಪತ್ರ

ಮುಂಬೈ: ಐಎಂಎ ಮಹಾರಾಷ್ಟ್ರವು ಪತಂಜಲಿಯ ವಿವಾದಿತ ಕೊರೊನಿಲ್ ಕಿಟ್ ಅನ್ನು ತೀವ್ರವಾಗಿ ವಿರೋಧಿಸಿ ಕೇಂದ್ರಕ್ಕೆ ಪತ್ರ ಬರೆದಿದೆ.

ಮಹಾರಾಷ್ಟ್ರ ಐಎಂಎ ಅಧ್ಯಕ್ಷ ಡಾ.ರಾಧಾಕೃಷ್ಣ ಲೋಂಡೆ ಈ ಬಗ್ಗೆ ಮಾಹಿತಿ ನೀಡಿ, ಅಲೋಪತಿ ಚಿಕಿತ್ಸೆ ಬಗ್ಗೆ ಬಾಬಾ ರಾಮದೇವ್ ಹೇಳಿಕೆಯನ್ನು ಐಎಂಎ ಇಂಡಿಯಾ ತೀವ್ರವಾಗಿ ವಿರೋಧಿಸುತ್ತೆ. ಉತ್ತರಾಖಂಡ ಐಎಂಎ 1000 ಕೋಟಿ ಮೊಕದ್ದಮೆ ಹೂಡಲು ಎಚ್ಚರಿಕೆ ನೀಡಿದ್ದು, ಪತಂಜಲಿಯ ಔಷಧ ಪರವಾನಗಿ ರದ್ದುಗೊಳಿಸುವಂತೆ ಕೋರಿದೆ ಎಂದರು.

ಕೋವಿಡ್ ಚಿಕಿತ್ಸೆಯಲ್ಲಿ ಕೊರೊನಿಲ್ ಕಿಟ್ ಸೇರಿಸುವ ಕೆಲವು ರಾಜ್ಯಗಳ ನಿರ್ಧಾರವನ್ನು ಐಎಂಎ ಮಹಾರಾಷ್ಟ್ರ ವಿರೋಧಿಸಿದೆ. WHO ಕೊರೊನಿಲ್​ ಔಷಧವನ್ನು ಅನುಮೋದಿಸುವುದಿಲ್ಲ ಎಂದು ಐಎಂಎ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಔಷಧಿಯ ಬಳಕೆಯನ್ನು ನಿಲ್ಲಿಸುವಂತೆ ಐಎಂಎ ಒತ್ತಾಯಿಸುತ್ತದೆ. ಹರಿಯಾಣ ಇತ್ತೀಚಿಗೆ ಕೋವಿಡ್ ಚಿಕಿತ್ಸೆಯಲ್ಲಿ ಕೊರೊನಿಲ್ ಕಿಟ್​ ಸೇರಿಸಿದೆ.

ಕೋವಿಡ್​​ ನಿರ್ವಹಣೆ ಕಡೆಯಷ್ಟೇ ಗಮನಹರಿಸಿ: ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಗೊಂದಲಕ್ಕೆ ನಳಿನ್​ ತೆರೆ

Last Updated : Jun 5, 2021, 8:10 PM IST

ABOUT THE AUTHOR

...view details