ಬಾಗೇಶ್ವರ (ಉತ್ತರಾಖಂಡ್) :ಬಿಚ್ಲಾ ದಾನಪುರ ಪ್ರದೇಶಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಅವರ ನೇತೃತ್ವದಲ್ಲಿ ಸತ್ಯಾಗ್ರಹ ಚಳವಳಿ ಉತ್ತರಾಖಂಡದ ಬಾಗೇಶ್ವರದಲ್ಲಿ ನಡೆದಿದೆ. ಇದೇನು ಮಹಾ ಎಂದುಕೊಳ್ಳಬೇಡಿ. ಇಲ್ಲಿನ ಜನ ಸುಮಾರು 75 ಕಿ.ಮೀ ದೂರ ಬೃಹತ್ ಮೆರವಣಿಗೆ ಮಾಡಿ ವಿಶೇಷ ಚಳವಳಿಯನ್ನ ಆಯೋಜಿಸಿ ಗಮನ ಸೆಳೆದಿದ್ದಾರೆ.
ಗುರುವಾರ ಶಾಮಾ ಪ್ರದೇಶದಿಂದ ಪ್ರಾರಂಭವಾದ ಪಾದಯಾತ್ರೆ 75 ಕಿ.ಮೀ ಪ್ರಯಾಣಿಸಿ ಸಂಜೆ ನಾಲ್ಕು ಗಂಟೆಗೆ ಬಾಗೇಶ್ವರ ತಲುಪಿತು. ಮೂಲ ಸೌಕರ್ಯಗಳಾದ ಸಂವಹನ, ರಸ್ತೆಗಳು, ಶಿಕ್ಷಣ ಸೇರಿದಂತೆ 11 ಅಂಶಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಮಾತನಾಡಿ, 21 ನೇ ಶತಮಾನದಲ್ಲೂ ಬಿಚ್ಲಾ ದಾನ್ಪುರ್ ಪ್ರದೇಶದ ಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಸತ್ಯಾಗ್ರಹ ಚಳವಳಿಯ ಪ್ರಮುಖ ಉದ್ದೇಶ ಎಂದರೆ, ಬಿಚ್ಲಾ ದಾನಪುರ ಪ್ರದೇಶದ ಅಭಿವೃದ್ಧಿ.