ಕರ್ನಾಟಕ

karnataka

By

Published : Aug 20, 2020, 4:39 PM IST

ETV Bharat / bharat

ಮೃಗಾಲಯದಲ್ಲಿ ವಿದ್ಯುತ್​ ಅವಘಡ: ಇಬ್ಬರು ಬಲಿ

ಕೋಲ್ಕತ್ತಾದ ಅಲಿಪೋರ್ ಮೃಗಾಲಯದಲ್ಲಿ ಸಂಭವಿಸಿದ ವಿದ್ಯುತ್​ ಅವಘಡದಲ್ಲಿ ಜಾಹೀರಾತು ಏಜೆನ್ಸಿಯ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ವಿದ್ಯುತ್​ ಅವಘಡಕ್ಕೆ  ಇಬ್ಬರು ಬಲಿ
ವಿದ್ಯುತ್​ ಅವಘಡಕ್ಕೆ ಇಬ್ಬರು ಬಲಿ

ಕೋಲ್ಕತ್ತಾ: ಇಲ್ಲಿನ ಅಲಿಪೋರ್ ಮೃಗಾಲಯದಲ್ಲಿ ವಿದ್ಯುತ್​ ಅಪಘಡದಿಂದ ಜಾಹೀರಾತು ಏಜೆನ್ಸಿಯ ಇಬ್ಬರು ಸಾವನ್ನಪ್ಪಿದ್ದಾರೆ.

ಮುಂಜಾನೆಯಿಂದಲೇ ಭಾರಿ ಮಳೆ ಸುರಿಯುತ್ತಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಮೃಗಾಲಯದಲ್ಲಿ ಅಳವಡಿಸಿದ್ದ ಜಾಹೀರಾತು ಫಲಕಗಳು ದರೆಗುರುಳಿದ್ದವು. ಈ ಹಿನ್ನೆಲೆಯಲ್ಲಿ ಏಜೆನ್ಸಿಯ ಸಿಬ್ಬಂದಿಯು ಅಲ್ಲಿನ ಜಾಹೀರಾತು ಫಲಕ ಸರಿಪಡಿಸುತ್ತಿದ್ದರು.

ವಿದ್ಯುತ್​ ಅವಘಡಕ್ಕೆ ಇಬ್ಬರು ಬಲಿ

ಈ ವೇಳೆ ಅವಘಡ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details