ಕರ್ನಾಟಕ

karnataka

By

Published : Mar 4, 2020, 6:37 PM IST

ETV Bharat / bharat

ಅಲ್ಪಸಂಖ್ಯಾತರಿಗೆ ಅಭದ್ರತೆ: ಎನ್​ಆರ್​ಪಿ ವಿರುದ್ಧ ನಿರ್ಣಯ ಮಂಡಿಸಲು ಜಗನ್ ಸರ್ಕಾರ ನಿರ್ಧಾರ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಪ್ರಕ್ರಿಯೆ ನಿಲ್ಲಿಸಲು ಆಂಧ್ರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ.

AP Cabinet Resolution,ಎನ್​ಆರ್​ಪಿ ವಿರುದ್ಧ ನಿರ್ಣಯ ಮಂಡಿಸಲು ಜಗನ್ ಸರ್ಕಾರ ನಿರ್ಧಾರ
ಎನ್​ಆರ್​ಪಿ ವಿರುದ್ಧ ನಿರ್ಣಯ ಮಂಡಿಸಲು ಜಗನ್ ಸರ್ಕಾರ ನಿರ್ಧಾರ

ಹೈದರಾಬಾದ್: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಪ್ರಕ್ರಿಯೆ ನಿಲ್ಲಿಸಲು ಆಂಧ್ರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿರುವ ಸಚಿವ ಪೆರ್ನಿ ನಾನಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಎನ್​ಪಿಆರ್​ ಮಾರಕವಾಗಿದೆ ಎಂದಿದ್ದಾರೆ. ಎನ್‌ಪಿಆರ್ ಪ್ರಶ್ನಾವಳಿಯಲ್ಲಿ ಬದಲಾವಣೆಗಳನ್ನು ತರಲು ಕ್ಯಾಬಿನೆಟ್ ನಿರ್ಧರಿಸಿದೆ. ಪ್ರಶ್ನೆಗಳು ಬದಲಾವಣೆಯಾಗುವವರೆಗೆ ಎನ್​ಪಿಆರ್​ ಪ್ರಕ್ರಿಯೆಗಳನ್ನು ನಿಲ್ಲಿಸಲು ಜಗನ್​ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

2010ರಲ್ಲಿ ಚಾಲ್ತಿಯಲ್ಲಿದ್ದ ಷರತ್ತುಗಳನ್ನು ಎನ್​ಪಿಆರ್​ ಜನಗಣತಿಯಲ್ಲೂ ಅಳವಡಿಸಬೇಕು. ಅಲ್ಲದೆ ಎನ್​ಪಿಆರ್​ ಬಗ್ಗೆ ಜನರಲ್ಲಿರುವ ಆತಂಕವನ್ನು ದೂರ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಚಿವ ಪೆರ್ನಿ ನಾನಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಎನ್‌ಪಿಆರ್‌ನಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳು ನಮ್ಮ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅಭದ್ರತೆ ಸೃಷ್ಟಿಸುತ್ತವೆ. 2010ರಲ್ಲಿ ಚಾಲ್ತಿಯಲ್ಲಿದ್ದ ಷರತ್ತುಗಳನ್ನು ಕೇಂದ್ರ ಒಪ್ಪಿಕೊಂಡು ಪ್ರಶ್ನಾವಳಿಯನ್ನು ಬದಲಾಯಿಸಬೇಕು. ಅಲ್ಲಿಯವರೆಗೂ ಎನ್​ಪಿಆರ್​ಗೆ ಆಂಧ್ರ ಸರ್ಕಾರ ಸಹಕಾರ ನೀಡುವುದಿಲ್ಲ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಎನ್​ಪಿಆರ್​ ವಿರುದ್ಧ ನಿರ್ಣಯ ಮಂಡಿಸಲು ಬಯಸುತ್ತೇವೆ ಎಂದಿದ್ದಾರೆ.

ABOUT THE AUTHOR

...view details