ಕರ್ನಾಟಕ

karnataka

By

Published : Jul 7, 2019, 3:51 PM IST

ETV Bharat / bharat

ಕೋರ್ಟ್​ನಿಂದ ಬೇಲ್​​​​​​ ಪಡೆದು ರೆಸ್ಟೋರೆಂಟ್​ನಲ್ಲಿ ದೋಸೆ ಸವಿದ ರಾಗಾ

ಚುನಾವಣಾ ಪ್ರಚಾರ ಸಮಾವೇಶದ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಸುಶಿಲ್ ಕುಮಾರ್ ಮೋದಿ ಅವರು ರಾಹುಲ್​ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ಪಾಟ್ನಾದ ಸಿವಿಲ್​ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ರಾಹುಲ್​ ಗಾಂಧಿಗೆ ಸೂಚಿಸಿತ್ತು.

ಚಿತ್ರ ಕೃಪೆ ಟ್ವಿಟ್ಟರ್

ಪಾಟ್ನಾ:ಬಿಹಾರ್ ಡಿಸಿಎಂ ಸುಶಿಲ್ ಕುಮಾರ್ ಮೋದಿ ನೀಡಿದ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಪಾಟ್ನಾ ಸಿವಿಲ್​ ಕೋರ್ಟ್​ನಿಂದ ಜಾಮೀನು ಪಡೆದ ಬಳಿಕ ರಾಹುಲ್ ಗಾಂಧಿ ರಸ್ತೆ ಬದಿಯ ರೆಸ್ಟೋರೆಂಟ್​ನಲ್ಲಿ ದೋಸೆ ಸವಿದರು.

ಚುನಾವಣಾ ಪ್ರಚಾರ ಸಮಾವೇಶದ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಡಿಸಿಎಂ ಸುಶಿಲ್ ಕುಮಾರ್ ಮೋದಿ ಅವರು ರಾಹುಲ್​ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ಪಾಟ್ನಾದ ಸಿವಿಲ್​ ನ್ಯಾಯಾಲಯ ವಿಚಾರಣೆಗೆ ಹಾಜಗುವಂತೆ ರಾಹುಲ್​ ಗಾಂಧಿಗೆ ಸೂಚಿಸಿತ್ತು.

ಕೋರ್ಟ್​ ವಿಚಾರಣೆ ಎದುರಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದು ಹೊರಬಂದ ರಾಹುಲ್​, ಇಲ್ಲಿನ ರಸ್ತೆ ಬದಿಯ ರೆಸ್ಟೋರೆಂಟ್​ ಒಂದರಲ್ಲಿ ದಕ್ಷಿಣ ಭಾರತದ ದೋಸೆ ಸವಿಸಿದರು. ಈ ವೇಳೆ ಕಾಂಗ್ರೆಸ್​ನ ಮುಖಂಡರಾದ ಶಕ್ತಿಸಿನ್ಹಾ ಗೋಹಿಲ್​, ಮದನ್ ಮೋಹನ್ ಜಾ, ಅಖಿಲೇಶ್ ಪ್ರಸಾದ್​ ಸಿಂಗ್ ಸೇರಿದಂತೆ ಇತರರು ಇದ್ದರು.

ರಾಹುಲ್ ಅವರನ್ನು ನೋಡಲು ಸ್ಥಳೀಯರು ರೆಸ್ಟೋರೆಂಟ್​ನತ್ತ ಆಗಮಿಸಿದ್ದು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ತಾಳ್ಮೆಯಿಂದಲೇ ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು ರಾಹುಲ್​ ಗಾಂಧಿ.

For All Latest Updates

TAGGED:

ABOUT THE AUTHOR

...view details