ಕರ್ನಾಟಕ

karnataka

By

Published : Aug 28, 2019, 9:17 AM IST

ETV Bharat / bharat

ಕೆಸರಲ್ಲಿ ಸಿಲುಕಿದ್ದ ಬೊಲೆರೊ ಕ್ಷಣಮಾತ್ರದಲ್ಲಿ ಎತ್ತಿದ ಮಹಿಳಾಮಣಿಗಳು..! ವಿಡಿಯೋಗೆ ಸಿಕ್ತು ಭಾರಿ ಮೆಚ್ಚುಗೆ

ಕೆಸರಿನಲ್ಲಿ ಸಿಲುಕಿದ್ದ ಮಹೀಂದ್ರಾ ಬೊಲೆರೋ ವಾಹನವನ್ನು ನಾಗಾಲ್ಯಾಂಡ್ ಮಹಿಳಾ ಬೆಟಾಲಿನ್​ ಎತ್ತುವ ವಿಡಿಯೋ ಇದೀಗ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಹಾಗೂ ಉದ್ಯಮಿ ಆನಂದ್ ಮಹೀಂದ್ರರ ಗಮನ ಸೆಳೆದಿದೆ.

ಕೆಸರಲ್ಲಿ ಸಿಲುಕಿದ್ದ ಬೊಲೆರೊ

ನವದೆಹಲಿ: ಕೆಸರಿನಲ್ಲಿ ಸಿಲುಕಿದ್ದ ಮಹೀಂದ್ರ ಬೊಲೆರೋ ವಾಹನವನ್ನು ನಾಗಾಲ್ಯಾಂಡ್ ಮಹಿಳಾ ಬೆಟಾಲಿನ್​​ ಕ್ಷಣಮಾತ್ರದಲ್ಲೇ ಮೇಲೆಕ್ಕೆತ್ತುವ ವಿಡಿಯೋ ಸದ್ಯ ವೈರಲ್ ಆಗಿದೆ.

ನಾಗಾಲ್ಯಾಂಡ್ ಶಾಸಕ ಹೊನ್ಲೊಮೋ ಕಿಕೊನ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಾಹಸದ ವಿಡಿಯೋ ಶೇರ್ ಮಾಡಿಕೊಂಡಿದ್ದು, ಒಂದು ಹಳೆಯ ವಿಡಿಯೋ ಆದರೆ ತುಂಬಾ ಮಂದಿ ಇದನ್ನು ನೋಡಬೇಕಿದೆ ಎಂದು ಬರೆದುಕೊಂಡಿದ್ದಾರೆ. ಇದೇ ಟ್ವೀಟ್​ನಲ್ಲಿ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ, ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ. ನಾಂದಿ ಫೌಂಡೇಷನ್​ ಸಿಇಒ ಮನೋಜ್ ಕುಮಾರ್​ರಿಗೆ ಟ್ಯಾಗ್ ಮಾಡಿದ್ದಾರೆ.

ರಿಜಿಜು, ಆನಂದ್ ಮಹೀಂದ್ರ ಸ್ಪಂದನೆ:

ನಾಗಾಲ್ಯಾಂಡ್ ಶಾಸಕನ ಈ ಟ್ವೀಟ್​​ಗೆ ಉದ್ಯಮಿ ಆನಂದ್ ಮಹೀಂದ್ರ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಸ್ಪಂದಿಸಿದ್ದಾರೆ.

ಆನಂದ್ರ ಮಹೀಂದ್ರ ರಿಟ್ವೀಟ್ ಮಾಡಿದ್ದು, ಮಹಿಳೆಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಹಿಳೆಯರ ಜೋಶ್ ಹಾಗೂ ಪವರ್​ ಅನ್ನು ಪ್ರಶಂಸಿಸುತ್ತೇನೆ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details