ಕರ್ನಾಟಕ

karnataka

By

Published : Nov 21, 2019, 7:03 PM IST

ETV Bharat / bharat

ನಿತ್ಯಾನಂದ ನಾಪತ್ತೆ..? ವಿದೇಶಾಂಗ ಇಲಾಖೆಯಿಂದ ಸ್ಪಷ್ಟನೆ

ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.

ನಿತ್ಯಾನಂದ

ಅಹಮದಾಬಾದ್:ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದನ ಮೇಲೆ ಕೇಸ್​ಗಳು ದಾಖಲಾಗುತ್ತಿದ್ದಂತೆ ಆತ ಭಾರತದಲ್ಲಿ ಸದ್ಯ ಇಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.

ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಿತ್ಯಾನಂದ ದೇಶ ತೊರೆದಿರುವ ಬಗ್ಗೆ ಗುಜರಾತ್ ಪೊಲೀಸ್ ಅಥವಾ ಗೃಹ ಸಚಿವಾಲಯದಿಂದ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.

ಮಕ್ಕಳ ಅಪಹರಣ ಪ್ರಕರಣದಲ್ಲಿ ನಿತ್ಯಾನಂದನ ವಿರುದ್ಧ ದೂರು ದಾಖಲು!

ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಇಬ್ಬರು ಮಹಿಳಾ ಅನುಯಾಯಿಗಳನ್ನು ಗುಜರಾತ್ ಪೊಲೀಸರು ಬುಧವಾರ ಬಂಧಿಸಿದ್ದರು.

ABOUT THE AUTHOR

...view details