ಕರ್ನಾಟಕ

karnataka

By

Published : Nov 21, 2019, 6:58 PM IST

ETV Bharat / bharat

ಗಾಂಜಾ ಬೆಳೆ ಕಾನೂನುಬದ್ಧವಾಗಲಿ: ಮಧ್ಯಪ್ರದೇಶ ಸಚಿವನ ಹೇಳಿಕೆಗೆ ಭಾರಿ ವಿರೋಧ

ಗಾಂಜಾ ಬೆಳೆಯನ್ನು ಕಾನೂನು ಬದ್ಧಗೊಳಿಸಲು ಮಧ್ಯಪ್ರದೇಶ​ ಸರ್ಕಾರ ಬಯಸಿದೆ.

ಗಾಂಜಾ ಬೆಳೆ

ಭೋಪಾಲ್​​​( ಮಧ್ಯಪ್ರದೇಶ):ಗಾಂಜಾ ಬೆಳೆಯನ್ನು ಕಾನೂನು ಬದ್ಧಗೊಳಿಸಬೇಕೆಂಬ ಮಧ್ಯಪ್ರದೇಶ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಗಾಂಜಾವನ್ನು ಈಗಾಗಲೇ ಕ್ಯಾನ್ಸರ್​ ಮತ್ತು ಇತರೆ ಔಷಧಗಳಿಗೆ, ಬಯೋ ಪ್ಲಾಸ್ಟಿಕ್​ ಹಾಗೂ ಬಟ್ಟೆ ತಯಾರಿಕೆಗೆ ಬಳಸುತ್ತಿದ್ದು, ಈ ಬೆಳೆಯನ್ನು ಕಾನೂನು ಬದ್ಧಗೊಳಿಸಿದರೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ರಾಜ್ಯ ಕಾನೂನು ವ್ಯವಹಾರ ಸಚಿವ ಪಿ.ಸಿ.ಶರ್ಮ ಹೇಳಿದ್ದರು.

ಈ ಕುರಿತು ಬಿಜೆಪಿ ನಾಯಕ ರಾಮೇಶ್ವರ್​​ ಶರ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್​​ ಸರ್ಕಾರ ನಮ್ಮ ರಾಜ್ಯವನ್ನು ಕೆಳಹಂತಕ್ಕೆ ಕೊಂಡೊಯ್ಯುತ್ತಿದ್ದು, ಯುವಕರನ್ನು ಗಾಂಜಾ ವ್ಯಸನರನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details