ಕರ್ನಾಟಕ

karnataka

By

Published : Aug 3, 2019, 11:35 AM IST

ETV Bharat / bharat

ಕಾರು ಗುದ್ದಿ ಪತ್ರಕರ್ತ ಸಾವು: ಪಾನಮತ್ತ ಐಎಎಸ್​ ಅಧಿಕಾರಿ ಮೇಲೆ ಆರೋಪ

ಕೇರಳದ ತಿರುವನಂತಪುರದಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸಿರಾಜ್ ಪತ್ರಿಕೆಯ ಕೆ.ಎಂ. ಬಶೀರ್​ (35) ಮೃತಪಟ್ಟಿದ್ದಾರೆ. ಸರ್ವೆ ಡೈರೆಕ್ಟರ್​ ಶ್ರೀರಾಮ್​ ವೆಂಕಟರಮಣ್ ಎಂಬುವರ ಕಾರು ಗುದ್ದಿದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ.

ಕೇರಳ ಅಪಘಾತ

ತಿರುವನಂತಪುರ:ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಪತ್ರಕರ್ತರೊಬ್ಬರು ಸಾವಿಗೀಡಾದ ಘಟನೆ ಕೇರಳದ ಮ್ಯೂಸಿಯಂ ಪೊಲೀಸ್​ ಠಾಣೆ ಬಳಿ ಇಂದು ಬೆಳಗ್ಗೆ ನಡೆದಿದೆ.

ಸರ್ವೆ ಡೈರೆಕ್ಟರ್​ ಶ್ರೀರಾಮ್​ ವೆಂಕಟರಮಣ್ ಎಂಬುವರ ಕಾರು ನಿಂತಿದ್ದ ಬೈಕ್​ಗೆ ಗುದ್ದಿದ ಪರಿಣಾಮ ಸಿರಾಜ್ ಪತ್ರಿಕೆಯ ಕೆ.ಎಂ. ಬಶೀರ್​ (35) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಶ್ರೀರಾಮ್ ಅವರಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ ಭೀಕರ ಅಪಘಾತ

ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ, ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದ. ಅಲ್ಲದೆ, ಆತನ ಮದ್ಯವನ್ನೂ ಸೇವಿಸಿದ್ದ. ಕಾರಿನಲ್ಲಿ ಮಹಿಳೆಯೊಬ್ಬಳು ಇದ್ದರು ಎಂದಿದ್ದಾರೆ. ಆದರೆ ಗಾಯಗೊಂಡಿರುವ ಶ್ರೀರಾಮ್​, ಘಟನೆ ನಡೆದ ವೇಳೆ ನಾನು ಕಾರು ಚಲಾಯಿಸುತ್ತಿರಲಿಲ್ಲ. ನನ್ನ ಸ್ನೇಹಿತ ಚಲಾಯಿಸುತ್ತಿದ್ದ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಸಿಸಿಟಿವಿ ಪರಿಶೀಲನೆ ಬಳಿಕ ಸತ್ಯ ಏನೆಂದು ತಿಳಿಯಲಿದೆ ಎಂದಿರುವ ಪೊಲೀಸರು, ಸದ್ಯ ಆ ಮಹಿಳೆಯನ್ನೂ ವಶಕ್ಕೆ ಪಡೆದಿದ್ದಾರೆ. ವಾಫಾ ಫಿರೋಜ್ ಎಂಬ ಮಹಿಳೆ ಹೆಸರಿನಲ್ಲಿಯೇ ಕಾರು ರಿಜಿಸ್ಟರ್​ ಆಗಿದೆ ಎಂದು ತಿಳಿದುಬಂದಿದೆ.

ಬಶೀರ್​ ತಿರೂರಿನ ಸಿರಾಜ್ ಪತ್ರಿಕೆಯಲ್ಲಿ ಮಲಪ್ಪುರಂನ ಸ್ಟಾಫ್ ರಿಪೋರ್ಟರ್​ ಆಗಿ, ನಂತರ ತಿರುವನಂತಪುರದ ಬ್ಯೂರೋ ಚೀಫ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ABOUT THE AUTHOR

...view details